ದಲೈಲಾಮ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ಯು.ಟಿ. ಖಾದರ್

ಮಂಗಳೂರು: ಮಾಜಿ ಸಚಿವ ಯು.ಟಿ ಖಾದರ್ ಅವರು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈಲಾಮ ಅವರನ್ನು ತಾಜ್ ಗೇಟ್ ವೇ ಹೋಟೆಲ್ನಲ್ಲಿ ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸಿದ್ದಾರೆ. ಈ ವೇಳೆ ಯು.ಟಿ ಖಾದರ್ ಅವರಲ್ಲಿ ದಲಾಯಿಲಾಮ ಅವರು ಭಾರತೀಯ ಪಾರಂಪರಿಕ ಜ್ಞಾನದ ಜೊತೆಗೆ ಆಧುನಿಕ ಸಂದೇಶ ವಿಶ್ವಕ್ಕೆ ಸಾರುವುದೆ ನನ್ನ ಗುರಿ. ಆತ್ಮ ಶಾಂತಿ, ಅಹಿಂಸೆಗೆ ಒತ್ತು ನೀಡುವ ಜೊತೆಗೆ ಕರುಣೆ, ಆಧ್ಯಾತ್ಮಿಕ ಶಿಕ್ಷಣ ನೀಡುವುದು ಪ್ರಧಾನ ಉದ್ದೇಶ. ಆಧುನಿಕ ಶಿಕ್ಷಣ ಬುದ್ಧಿಗೆ ಕ್ಷಮತೆ ನೀಡಿದರೆ ಭಾರತೀಯ ಪಾರಂಪರಿಕ […]
ಉಡುಪಿ: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸೆ.17ರ ವರೆಗೆ ವಿಶೇಷ ಸೋಣಾರತಿ

ಉಡುಪಿ: ಉಡುಪಿಯ ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸೋಣೆ ಮಾಸದ ದಿನಂಪ್ರತಿ ಸೆ. 17ರ ತನಕ ವಿಶೇಷ ಸೋಣಾರತಿ ಸೇವೆ ನಡೆಯಲಿದೆ. ಆ ಪ್ರಯುಕ್ತ ಕ್ಷೇತ್ರದಲ್ಲಿ ಪ್ರತೀ ಶುಕ್ರವಾರ ವಿಶೇಷ ಪೂಜೆ, ಜತೆಗೆ ಸೋಣೆ ಮಾಸದ ನಾಲ್ಕು ಶುಕ್ರವಾರವೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಹೂವಿನ ಪೂಜೆ, ರಂಗಪೂಜೆ, ಹಾಲು ಪಾಯಸ, ಅನ್ನಸಂತರ್ಪಣೆ ನಡೆಯಲಿದೆ. ಸೋಣಾರತಿ ಸಮಯದಲ್ಲಿ ಹಲಸಿನ ಮರದ ವಿವಿಧ ಆಕೃತಿಗಳ 12 ಆರತಿಗಳನ್ನು ಬೆಳಗಲಾಗುತ್ತದೆ. ಪ್ರತೀ ಶುಕ್ರವಾರ ಬೆಳಗಲ್ಪಡುವ 14 […]
ಕನ್ನರ್ಪಾಡಿ: 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ
ಉಡುಪಿ: ಉಡುಪಿ ಕಿನ್ನಿಮುಲ್ಕಿ ಸಮೀಪದ ಕನ್ನರ್ಪಾಡಿಯ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆಪ್ಟೆಂಬರ್ 2 ರಿಂದ ಸೆ.4ರ ವರೆಗೆ ಕಿನ್ನಿಮೂಲ್ಕಿ ಗಣಪತಿ ಮೈದಾನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.