ಇವರು ರಂಗು ರಂಗಿನ ರಂಗವಲ್ಲಿ ಅರಳಿಸ್ತಾರೆ: ರಂಗೋಲಿಯಲ್ಲೇ ಬದುಕು ಕಟ್ಟಿಕೊಂಡ ಮೂಡಬಿದ್ರೆಯ ಯುವ ಕಲಾವಿದ ಉಪೇಂದ್ರ ಭಟ್

ಆಧುನಿಕತೆಯ ನಾಗಾಲೋಟಕ್ಕೆ ಸಿಲುಕಿ ನಮ್ಮ ಸಂಪ್ರದಾಯಗಳು, ಸಂಸ್ಕೃತಿಗಳ ಆಚರಣೆ ಕಡಿಮೆಯಾಗುತ್ತ ಸಾಗುತ್ತಿವೆ. ಒಂದು ಕಾಲದಲ್ಲಿ ಮೆರೆಯುತ್ತಿದ್ದ ರಂಗೋಲಿ ಕಲೆ ಕೂಡ ತೆರೆಮರೆಗೆ ಸರಿಯುತ್ತಿರುವ ಕಾಲವಿದು.  ವೈಟ್ ಕಾಲರ್‌ಗಳ ಉದ್ಯೋಗವೇ ಬೇಕು ಎನ್ನುವ ಇಂತಹ ಸಂದರ್ಭದಲ್ಲಿ ಇಲ್ಲೊಬ್ಬರು ಈ ಪೌರೋಹಿತ್ಯ ಹಾಗೂ ರಂಗೋಲಿಗಳಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.ಅವರೇ ಮೂಡಬಿದ್ರೆಯ ಉಪೇಂದ್ರ ಭಟ್. ತರಹೇವಾರಿ ರಂಗೋಲಿ ಬಿಡಿಸುವುದು ಇವರಿಗೆ ನೀರು ಕುಡಿದಷ್ಟೇ ಸಲೀಸು. ರಂಗೋಲಿಯಿಂದಲೇ ಇವರು ಫೇಮಸ್ಸು. ಭಟ್ಟರ ಕೈಯಲ್ಲಿ, ರಂಗಿನ ರಂಗವಲ್ಲಿ: ಬಾಲ್ಯದ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಮುಗಿಸಿದ ಉಪೇಂದ್ರ ಭಟ್ಟರು  […]

ಪುತ್ತೂರು ಗ್ಯಾಂಗ್ ರೇಪ್ ಪ್ರಕರಣ; ವೀಡಿಯೋ ಶೇರ್ ಮಾಡಿದ ಮತ್ತೆ ಮೂವರ ಬಂಧನ

ಮಂಗಳೂರು: ಪುತ್ತೂರು ಖಾಸಗಿ‌ ಕಾಲೇಜಿನ ವಿದ್ಯಾರ್ಥಿಗಳಿಂದ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಹಂಚಿಕೆ ಆರೋಪದಲ್ಲಿ ಮತ್ತೆ ಮೂವರನ್ನು ಬಂಧಿಸಲಾಗಿದೆ. ಶೌಕತ್ ಆಲಿ (34), ನಜೀರ್ (33), ಜಾಬಿರ್ (26) ಬಂಧಿತರು. ಈ ಮೂವರು ಗ್ಯಾಂಗ್ ರೇಪ್ ವಿಡಿಯೋ ವೈರಲ್ ಮಾಡಿದ್ದಾರೆ. ಸದ್ಯ ವಿಡಿಯೋ ಶೇರ್ ಮಾಡಿದ ವಿಚಾರದಲ್ಲಿ ಒಟ್ಟು 11 ಆರೋಪಿಗಳ ಬಂಧನವಾಗಿದೆ. ದ.ಕ. ಜಿಲ್ಲೆಯ ಪುತ್ತೂರು ನಗರ ಪೊಲೀಸರ ಕಾರ್ಯಾಚರಣೆ ನಡೆಸಿದ್ದಾರೆ.