ಉಡುಪಿ: ಸಿ ಎ ಗುಜ್ಜಡಿ ಪ್ರಭಾಕರ್ ನಾಯಕ್ ಇವರ ಮಾರ್ಗದರ್ಶನದಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ನವೆಂಬರ್ 2024 ನೇ ಸಾಲಿನ ಸಿ ಎ ಅಂತಿಮ ಪರೀಕ್ಷೆಯಲ್ಲಿ ಉಡುಪಿ ಧನುಷಾ ಭಟ್ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.
ಇವರು ಉಡುಪಿ ತೆಂಕಪೇಟೆಯ ದೇವಾನಂದ ಭಟ್ ಮತ್ತು ದೀಪಿಕಾ ಭಟ್ ರವರ ದಂಪತಿ ಪುತ್ರಿ.ಇವರು ಗುಜ್ಜಾದಿ ನಾಯಕ್ ಅಸೋಸಿಯೇಟ್ಸ್ ನಲ್ಲಿ ಆರ್ಟಿಕಲ್ಶಿಪ್ ತರಬೇತಿ ಪಡೆಯುತ್ತಿದ್ದಾರೆ.