ಉಡುಪಿ: ಕೊರೊನಾ ಸೋಂಕಿಗೆ ತುತ್ತಾಗಿರುವ ರಾಜ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೂಡಲೇ ಗುಣಮುಖರಾಗಲಿ. ಅವರು ಎಂದಿನಂತೆ ತಮ್ಮ ಉತ್ಸಾಹ -ಚೈತನ್ಯವನ್ನು ತುಂಬಿಕೊಂಡು ನಾಡಿಗೆ ಬಹುಕಾಲ ಸೇವೆ ಸಲ್ಲಿಸುವಂತಾಗಲಿ. ಅವರಿಗೆ ಉತ್ತಮ ಆಯುಷ್ಯ ಆರೋಗ್ಯವನ್ನು ಕರುಣಿಸುವಂತೆ ಉಡುಪಿ ಶ್ರೀ ಕೃಷ್ಣ ಮತ್ತು ನಮ್ಮ ಆರಾಧ್ಯಮೂರ್ತಿ ಶ್ರೀರಾಮ ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸುತ್ತೇವೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹಾರೈಸಿದ್ದಾರೆ.












