ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ ಇಂದು ದೇಶದ 76 ನೇ ಗಣರಾಜ್ಯ ದಿನಾಚರಣೆಯನ್ನು ಜ.26 ಭಾನುವಾರ ವೈಭವದಿಂದ ಆಚರಿಸಲಾಯಿತು. ಡಿ ಎಮ್ ಸಿ ಉಪಾಧ್ಯಕ್ಷೆ ಶ್ರೀಮತಿ ಕೀರ್ತಿ ಯವರು ಧ್ವಜಾರೋಹಣವನ್ನು ನೆರವೇರಿಸಿದರು.
ಮುಖ್ಯ ಶಿಕ್ಷಕಿ ಏನ್ ಸರಸ್ವತಿ ಯವರು ಸೇರಿರುವ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಹಳೆ ವಿದ್ಯಾರ್ಥಿ ದೇವೇಂದ್ರ ಏ ಕಾಮತ್ ರವರು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಸತ್ಯಾನಂದ ನಾಯಕ್, ಪಂಚಾಯತ್ ಸದಸ್ಯ ಇಸ್ಮಾಯಿಲ್ ಆತ್ರಾಡಿ ಇವರು ಹಾಜರಿದ್ದರು ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ ಶ್ರೀಮತಿ ಕೀರ್ತಿ ಯವರು ಧ್ವಜಾರೋಹಣ ಗೈದು ಗಣರಾಜ್ಯ ದಿನದ ಮಹತ್ವ ವನ್ನು ತಿಳಿಸಿದರು. ಮಕ್ಕಳಿಂದ ಗಣರಾಜ್ಯ ದ ಬಗ್ಗೆ ಚುಟುಕು ಭಾಷಣ ಮಾಡಿಸಲಾಯಿತು. ಮತ್ತು ದೇಶಕ್ಕೆ ಜಯಕಾರ ಘೋಷಣೆಗಳನ್ನು ಮಾಡಲಾಯಿತು.
ಫೋಟೋ ಗ್ರಾಪಿಯಲ್ಲಿ ವಿಮಲಾ ಟೀಚರ್ ರವರು ಸಹಕರಿಸಿದರು. ಶ್ರೀಮತಿ ಶಾರದಾ ಟೀಚರ್ ರವರು ಸರ್ವರನ್ನು ವಂದಿಸಿದರು. ಶಿಕ್ಷಕಿಯರಾದ ಶಬನಾ ಪರ್ವೀನ್, ಜ್ಯೋತಿ, ಸುಹಾಸಿನಿ ರವರು ಕಾರ್ಯಕ್ರಮದ ಉಸ್ತುವಾರಿ ವಹಿಸಿ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಾಹಿರ, ಫಾತಿಮಾ, ನಿಶಾ, ಸಬಿನ, ಕುರೈಸಬಾನು, ಶೋಭಾ, ಸುಕನ್ಯಾ, ಹೇಮಲತಾ ಸತೀಶ್ ನಾಯ್ಕ್ ಪಡು ಆತ್ರಾಡಿ, ಸುಧೀರ, ದಾನಿಶ್, ಗಾಯತ್ರಿ, ಬೇಬಿ, ಮಾಲತಿ ಶೆಟ್ಟಿ, ಮಹಮ್ಮದ್ ಇರ್ಫಾನ್, ರೇಖಾ, ರಾಜೇಶ್ವರಿ ಮುಂತಾದವರು ಹಾಜರಿದ್ದರು.












