ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ ಗುಡ್ಡೆಯಲ್ಲಿ ಗಣೇಶ ಚತುರ್ಥಿ ಆಚರಣೆ

ಉಡುಪಿ: ಇದೇ ತಿಂಗಳ ತಾರೀಕು 7ರ ಶನಿವಾರದಂದು ಭಾದ್ರಪದ ಶುಕ್ಲ ಚೌತಿ ತಿಥಿಯಂದು ಶ್ರೀ ಕ್ಷೇತ್ರದ ಪ್ರಸನ್ನ ಗಣಪತಿಯ ಸನ್ನಿಧಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ, ಮೂಡು ಗಣಪತಿ ಸೇವೆ ಸಹಿತ ಅಷ್ಟೋತ್ತರ ಶತ ನಾಳಿಕೇರ ಗಣ ಯಾಗವು(108 ತೆಂಗಿನಕಾಯಿ ಗಣ ಯಾಗವು ) ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ..

ಪ್ರಾತಃಕಾಲ ಗಂಟೆ ಒಂಬತ್ತರಿಂದ ಗಣ ಯಾಗವು ಆರಂಭಗೊಳ್ಳಲಿದೆ.ಮಧ್ಯಾಹ್ನ ಮೂಡು ಗಣಪತಿ ಸೇವೆ ಪ್ರಸನ್ನ ಪೂಜೆ ಸಂಜೆ ರಂಗ ಪೂಜೆ ನೆರವೇರಲಿದೆ..
ಈ ಪೂಜೆಯಲ್ಲಿ ಸೇವೆ ನೀಡಲಿಚ್ಚಿಸುವವರು
ಸೇವಾ ಕಾಣಿಕೆಯನ್ನು ಗೂಗಲ್ ಪೇ ಮುಖಾಂತರ ಪಾವತಿಸಿ, ಪೂಜಾ ಸಂಕಲ್ಪಕ್ಕೆ ತಮ್ಮ ಹೆಸರನ್ನು ನೋಂದಾಯಿಸಬಹುದು..

ಮೂಡು ಗಣಪತಿ ಸೇವೆ ಸಹಿತ ಗಣ ಹೋಮ ದ ಕಾಣಿಕೆ :250/- ರೂಪಾಯಿಗಳು

ಮೂಡು ಗಣಪತಿ ಸೇವೆ, ಗಣ ಹೋಮ, ಹಾಗೂ
ರಂಗಪೂಜೆ ಅನ್ನದಾನ, ದ ಕಾಣಿಕೆ :500/- ರೂಪಾಯಿಗಳು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9342749650
ಶ್ರೀಮತಿ ಕುಸುಮ ನಾಗರಾಜ ಆಚಾರ್ಯ
ಕ್ಷೇತ್ರ ಉಸ್ತುವಾರಿಗಳು

( ಕಾಣಿಕೆ ಕಳುಹಿಸಿದವರು ತಮ್ಮ ಹೆಸರು ನಕ್ಷತ್ರವನ್ನು ವಾಟ್ಸಪ್ ಮಾಡಿ ತಿಳಿಸಬೇಕಾಗಿ ವಿನಂತಿ )