ಮಕರ ಸಂಕ್ರಾಂತಿ ಉತ್ಸವ; ಸಾಮಾನ್ಯ ವೃತಾಧಾರಿಗಳಂತೆ ಶಬರಿಮಲೆಯಾತ್ರೆ ಕೈಗೊಂಡ ಉಡುಪಿ ಶಾಸಕರು

ಉಡುಪಿ: ಮಕರ ಸಂಕ್ರಾಂತಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಲಕ್ಷಾಂತರ ಭಕ್ತರು ಪ್ರತಿದಿನ ಅಯ್ಯಪ್ಪಸ್ವಾಮಿ ದೇವರ ದರ್ಶನ ಮಾಡುತ್ತಿದ್ದಾರೆ. ದೇಶದ ವಿವಿಧ ಭಾಗಗಳಿಂದ ಕೇರಳದ ಶಬರಿಮಲೆಗೆ ಜ್ಯೋತಿ ದರ್ಶನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ.

Oplus_131072

ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕಳೆದ 21 ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸಿ ವೃತಾಚರಣೆ ಮಾಡುತ್ತಿದ್ದಾರೆ. ಉಡುಪಿಯ ಹಿಂದೂ ಯುವ ಸೇನೆ ಮತ್ತು ಬನ್ನಂಜೆಯ ಅಯ್ಯಪ್ಪ ಭಕ್ತವೃಂದದ ಶಿಬಿರದಲ್ಲಿ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ನಡೆಸುವ ಮೂಲಕ ಯಶ್ ಪಾಲ್ ಸುವರ್ಣ ತಂಡ ಶಬರಿಮಲೆಯಾತ್ರೆ ಕೈಗೊಂಡಿದೆ. ಸಾಮಾನ್ಯ ವೃತಾಧಾರಿಗಳಂತೆ ಶಾಸಕ ಯಶ್ ಪಾಲ್ ಸುವರ್ಣ ಶಬರಿಮಲೆಯ ಯಾತ್ರೆ ಮಾಡಲಿದ್ದಾರೆ.