ಬಲ್ಲಾಳ್ ಮೊಬೈಲ್ಸ್ ನಲ್ಲಿ ದೀಪಾವಳಿ ದಿ ಗ್ರೇಟ್ ಫೆಸ್ಟಿವಲ್ ಸೀಸನ್ ನ ಬಹುಮಾನ ವಿತರಣಾ ಕಾರ್ಯಕ್ರಮ

ಉಡುಪಿ: ಕರಾವಳಿಯ ಹೆಸರಾಂತ ಬಲ್ಲಾಳ್ ಮೊಬೈಲ್ಸ್ ನಲ್ಲಿ ದಿನಾಂಕ 14.02.2025 ರ ಶುಕ್ರವಾರ ದಂದು ದೀಪಾವಳಿ ದಿ ಗ್ರೇಟ್ ಫೆಸ್ಟಿವಲ್ ಸೀಸನ್ ನ ಲಕ್ಕಿ ಡ್ರಾ ವಿಜೇತರಿಗೆ ಸಂಸ್ಥೆಯ ಮಾಲಕರಾದ ಸಂದೇಶ್ ಬಲ್ಲಾಳ್ ರವರು ಬಹುಮಾನ ವಿತರಣೆ ನಡೆಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೃಷ್ಣ ಕುಲಾಲ್,
ಜಿಲ್ಲಾ ಉಪಾಧ್ಯಕ್ಷರು,ಮಾನ್ಯತೆ ಪಡೆದ ಗುತ್ತಿಗೆದಾರರ ಸಂಘ , ಉಡುಪಿ ಜಿಲ್ಲೆ, ಕಾಂತಾರ ಚಲನಚಿತ್ರ ಖ್ಯಾತಿಯ ಪಾತ್ರಧಾರಿ ಬಾಸುಮ ಕೊಡಗು,ಹಾಗೂ ಕಟಪಾಡಿ ರಕ್ಷಿತಾ ಆಭರಣ ಮಳಿಗೆಯ ಮಾಲಕರಾದ ಪ್ರಕಾಶ್ ಆಚಾರ್ಯರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಂಪರ್ ಬಹುಮಾನದ ಹೀರೋ ಬೈಕ್ ವಿಜೇತರಾದ ಉದಯ ಹಿರಿಯಡ್ಕ ಪ್ರಥಮ,T.V ವಿಜೇತರಾದ ರಂಜಿತ್ ದ್ವಿತೀಯ, ಸ್ಮಾರ್ಟ್ ಮೊಬೈಲ್ ವಿಜೇತರಾದ ಮುಸ್ತಾಫ ಕಾಪು ತೃತೀಯ ಬಹುಮಾನ ಪಡೆದುಕೊಂಡರು.ಹಾಗೂ ಆಕರ್ಷಕ ಉಡುಗೊರೆಗಳನ್ನು ಕೆವಿನ್, ಕೆ.ಪ್ರಕಾಶ್ ನಾಯಕ್, ಪೂರ್ವಿಕಾ, ದೀರಜ್, ಪ್ರತಿಮಾ, ಶ್ರಿಯಾನಿ, ಎಂ.ಎಸ್ ಕಾವ್ಯ ರಾವ್, ದೀಪಕ್, ಆಶ್ಪಕ್, ಅಜಿತ್ ಮಲ್ಪೆ ಇವರುಗಳಿಗೆ ವಿತರಿಸಲಾಯಿತು.ವಿಜೇತ ಶೆಟ್ಟಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.