ಜು.1: ಕ್ರಿಯೇಟಿವ್‌ನಲ್ಲಿ 15 ಪುಸ್ತಕಗಳ ಲೋಕಾರ್ಪಣೆ.

ಕಾರ್ಕಳ :‌ ಕ್ರಿಯೇಟಿವ್ ಪುಸ್ತಕ ಮನೆ ಕಾರ್ಕಳದ ಸಾಹಿತ್ಯ ಆಸಕ್ತರಿಗೆ, ಸಾಹಿತ್ಯ ಅಭಿರುಚಿಯುಳ್ಳವರಿಗೆ ಉತ್ತಮ ಸೇವೆಯನ್ನು ಒದಗಿಸುತ್ತ ಬರುತ್ತಿದೆ. ಇದೀಗ ಸಾಹಿತ್ಯದ ಮತ್ತೊಂದು ಹೊಸ ಹೆಜ್ಜೆ ಎಂಬಂತೆ ಕ್ರಿಯೇಟಿವ್‌ ಪುಸ್ತಕ ಮನೆ ಪ್ರಕಾಶನದ ವತಿಯಿಂದ ನಾಡಿನ ಪ್ರಖ್ಯಾತ ಬರಹಗಾರರ 15 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಕ್ರಿಯೇಟಿವ್‌ ಸಂಸ್ಥೆಯ ಸಂಸ್ಥಾಪಕ ಅಶ್ವತ್‌ ಎಸ್.‌ ಎಲ್.‌ ಹೇಳಿದರು.

ಅವರು ಪುಸ್ತಕಗಳ ಲೋಕಾರ್ಪಣೆ ಕುರಿತಾಗಿ ಜೂ. 28ರಂದು ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದರು. ಕಾರ್ಯಕ್ರಮ ಜು. 1 ರಂದು ಕ್ರಿಯೇಟಿವ್‌ ಕಾಲೇಜಿನ ಸಪ್ತಗಿರಿ ಕ್ಯಾಂಪಸ್‌ನಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಖ್ಯಾತ ಬರಹಗಾರ ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ) ಭಾಗಿಯಾಗಲಿದ್ದಾರೆ. ಶಾಸಕ ಸುನಿಲ್‌ ಕುಮಾರ್‌, ಕಸಾಪ ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಹಾಗೂ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕರಾದ ಗಣನಾಥ ಶೆಟ್ಟಿ, ಗಣಪತಿ ಕೆ. ಎಸ್.‌, ಪಿಆರ್‌ಓ ಲಿಶಾನ್‌, ಉಪನ್ಯಾಸಕ ರಾಘವೇಂದ್ರ ಅನುಬೆಳ್ಳೆ ಉಪಸ್ಥಿತರಿದ್ದರು.