ಕುಂದಾಪುರ: ಕುಂದಾಪುರ ಲಾಡ್ಜ್ ನಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಹುಬ್ಬಳ್ಳಿಯ ರೇಣುಕಾ ನಗರ ನಿವಾಸಿ ಗುರಯ್ಯ (47) ಅವರು ಮದ್ಯದ ಚಟ ಹೊಂದಿದ್ದು, ಮೇ.19ರಂದು ಮನೆಬಿಟ್ಟು ಹೋಗಿದ್ದರು.
ಕುಂದಾಪುರದ ಲಾಡ್ಜ್ನಲ್ಲಿ ಬಾಡಿಗೆಯಲ್ಲಿ ಇದ್ದವರು ಕಳೆದ 2 ದಿನಗಳಿಂದ ಬಾಗಿಲು ತೆರೆಯಲಿಲ್ಲ ಎಂಬ ಮಾಹಿತಿಯನ್ನು ಅವರ ಪತ್ನಿಗೆ ನೀಡಲಾಗಿತ್ತು. ಅವರು ಅನಾ ರೋಗ್ಯದಿಂದ ಅಥವಾ ವಿಪರೀತ ಶರಾಬು ಸೇವನೆಯಿಂದ ಮೃತ ಪಟ್ಟಿರಬಹುದು ಎಂದು ಪ್ರಕರಣ ದಾಖಲಾಗಿದೆ.