ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು (ರಿ.) ಹಿರಿಯಡಕ ಇವರ ನೇತೃತ್ವದಲ್ಲಿ ಹಾಗೂ ದೇವಾಡಿಗರ ಸಂಘ ಹಿರಿಯಡ್ಕ ಇವರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮುದ್ದು ಕೃಷ್ಣ ಹಾಗೂ ಮುದ್ದು ರಾಧಾ ಕೃಷ್ಣ ಸ್ಪರ್ಧೆಯು ಪ್ರಪ್ರಥಮ ಬಾರಿಗೆ ಹಿರಿಯಡ್ಕ ಶ್ರೀ ವೀರಭದ್ರ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಅದ್ದೂರಿಯಾಗಿ ಜರುಗಿತು.
100 ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಗೆ ನೋಂದಾವಣೆ ಮಾಡಿದ್ದು, ಕಾರ್ಯಕ್ರಮದ ಯಶಸ್ವಿಗೆ ಪ್ರಮುಖ ಕಾರಣವಾಗಿತ್ತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ, ಸ್ಮರಣಿಕೆ ಹಾಗೂ ಪದಕ ನೀಡಿ ಗೌರವಿಸಲಾಯಿತು.

ಶ್ರೀ ವೀರಭದ್ರ ಕ್ಯಾಟರರ್ಸ್ ಮಾಲಕ, ಎಚ್ ಶ್ರೀನಿವಾಸ್ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೇವಾಡಿಗ ಸಂಘ ಹಿರಿಯಡಕ ಇದರ ಅಧ್ಯಕ್ಷ ರಾಜೇಂದ್ರ ಕುಮಾರ್, ಖ್ಯಾತ ದೈವರಾಧಕರಾದ ಪಾಡಿಗಾರ ಶೇಖರ್. ವಿ, ಹಾಗೂ ಗೌತಮ್ ಸಿದ್ದಾಪುರ, ಉದ್ಯಮಿ ಗಳು ಉಡುಪಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮುಖ್ಯ ತೀರ್ಪುಗಾರರಾಗಿ ವಿದುಷಿ. ಶ್ರಾವ್ಯ, ಮೋಹನ ಕಡಬ ಹಾಗೂ ತಂಡದ ಅಧ್ಯಕ್ಷ ರಮೇಶ್ ಪೂಜಾರಿ ಪಡ್ಡಾಮ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಖ್ಯಾತ ದೈವ ನರ್ತಕ ರವಿ ಪಾಣಾರ, ಉದ್ಯಮಿ ಸುಧಾಕರ ಪೂಜಾರಿ, ಶಿವಕುಮಾರ್ ಕರ್ಜೆ, ಹರೀಶ್ ಸಾಲಿಯಾನ್ ಬೊಮ್ಮರಬೆಟ್ಟು ಪಂಚಾಯತ್ ಉಪಾಧ್ಯಕ್ಷರು, ಎಂಕುಲು ಫ್ರೆಂಡ್ಸ್ ಉಪಾಧ್ಯಕ್ಷ ಪ್ರಸನ್ನ ಉಪಸ್ಥಿತರಿದ್ದರು. ಕುಮಾರಿ ಶತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.












