ಉಡುಪಿ: ಜನಾರ್ದ​ನ್ ಕೊಡವೂರು​ ಹಾಗೂ ಪೂರ್ಣಿಮಾ ಜನಾರ್ದನ್ ದಂಪತಿಗಳಿಗೆ ಅಭಿನಂದನೆ.

ಉಡುಪಿ: ​ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​ ಸ್ಕೌಟ್ ಆಯುಕ್ತರಾಗಿ ಆಯ್ಕೆಯಾದ ಜನಾರ್ದ​ನ್ ಕೊಡವೂರು ಹಾಗೆಯೇ ಅಂಚೆ ಇಲಾಖೆಯ ಶ್ರೇಷ್ಠ​ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್​ ಪುರಸ್ಕೃತಗೊಂಡ ಪೂರ್ಣಿಮಾ ಜನಾರ್ದನ್ ದಂಪತಿಗಳನ್ನು ಗೌರವಿಸಲಾಯಿತು​.

​ಈ ಸಂದರ್ಭದಲ್ಲಿ​ ನಾಡೋಜ ಡಾ. ಕೆ. ಪಿ. ರಾವ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣಿೈ​, ​ಪ್ರಭಾವತಿ ಶೆಣೈ, ಅಧ್ಯಕ್ಷ ಪ್ರೊ. ಶಂಕರ್​, ಡಾ. ಗಣನಾಥ್ ಎಕ್ಕಾರ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್​ ಉಡುಪಿ ಶಾಖೆಯ ವ್ಯವಸ್ಥಾಪಕ​ ಹಫೀಸ್ ರೆಹಮಾನ್​, ಅಂಬ್ರಯ್ಯ ಮಠ​, ಡಾ. ಎಚ್. ಎಸ್. ಸತ್ಯನಾರಾಯಣ. ಡಾ. ಉಮೇಶ್ ಪುತ್ರನ್​,​ ಮಧುಸೂದನ್ ಹೇರೂರು​, ರವಿರಾಜ್ ಎಚ್.ಪಿ​, ರಾಜೇಶ್ ಭಟ್ ಪಣಿಯಾಡಿ​, ಸಂಧ್ಯಾ ಶೆಣೈ​, ರಾಘವೇಂದ್ರ ನಾಯ್ಕ್, ರಾಘವೇಂದ್ರ ಪ್ರಭು ಕರ್ವಾಲ್ ಉಪಸ್ಥಿತರಿದ್ದರು.