ಉಡುಪಿ:(ಎ ಸಿ ಸಿ ಇ ಎ) ರಜತ ಮಹೋತ್ಸವ ಪ್ರಯುಕ್ತ ಮೀಟ್ & ಗ್ರೀಟ್ ಹಾಗೂ ಸೌಲಭ್ಯಗಳ ಮಾಹಿತಿ

ಉಡುಪಿ:ಅಸೋಸಿಯೇಷನ್ ಓಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಮತ್ತು ಅರ್ಚಿಟೆಕ್ಟ್ಸ್ (ರಿ ) ಉಡುಪಿ ವತಿಯಿಂದ – ಸಂಸ್ಥೆಯ ರಜತ ಮೊಹೋತ್ಸವದ ಪ್ರಯುಕ್ತ ಮೀಟ್ & ಗ್ರೀಟ್ ಕಾರ್ಯಕ್ರಮ ಬುಧವಾರ ಕಡಿಯಾಳಿ ಹೋಟೆಲ್ ಓಷನ್ ಪರ್ಲ್ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿ ಮಂಗಳೂರಿನ ಎಸ್ ಎಸ್ ನಾಯಕ್ & ಅಸೋಸಿಯೇಟ್ಸ್ ಮುಖ್ಯಸ್ಥರಾದ ಸಿ ಎ ಎಸ್ ಎಸ್ ನಾಯಕ್ ರವರು ದೀಪ ಬೆಳಗಿಸಿ ಚಾಲನೆ ನೀಡಿ ಉಡುಪಿ ಪ್ರಗತಿ ಹೊಂದಲು ಎಂಜಿನಿಯರ್ಸ್ ಗಳ ಕೊಡುಗೆ ಅಪಾರವಾದದ್ದು. ಯುವ ಇಂಜಿನಿಯರ್ ದೊಡ್ಡ ನಗರಕ್ಕೆ , ವಿದೇಶಕ್ಕೆ ವಲಸೆ ಹೋಗುವುದನ್ನು ನಿಲ್ಲಿಸಿ, ಊರಿನಲ್ಲಿ ಇದ್ದು ನಿರ್ಮಾಣ ಕ್ಷೇತ್ರಕ್ಕೆ ಕೊಡುಗೆ ನೀಡಬಹುದು.

ಕೇಂದ್ರ , ರಾಜ್ಯ ಸರಕಾರದ ವಿವಿಧ ಯೋಜನೆಯ ಬ್ಯಾಂಕ ಸಾಲ ಸೌಲಭ್ಯ ಗಳ ಮಾಹಿತಿ ನೀಡಿದರು.ಯುವ ಜನಾಂಗದವರು ನಿರ್ಮಾಣ ಕ್ಷೇತ್ರಕ್ಕೆಬೇಕಾದ ಉತ್ಪನ್ನಗಳನ್ನು ( ಹೋಲೊ ಬ್ಲಾಕ್ , ಟೈಲ್ಸ್ , ಪಿ ವಿ ಸಿ ಪೈಪ್ ಗಳಂಥ ಗುಣಮಟ್ಟದ ವಿವಿಧ ವಸ್ತು ತಯಾರಿಕೆ ಮಾಡಿ ನೀವುಗಳು ಸರ್ ಎಂ.ವಿಶ್ವೇಶ್ವರಯ್ಯರ ತರಹ ಸಾಧಕ ಎಂಜಿನಿಯರ್ ಗಳಾಗಿ ಮೂಡಿ ಬರಬೇಕು ಎಂದು ಶುಭ ಹಾರೈಸಿದರು.

ಸಂಸ್ಥೆಯ ವತಿಯಿಂದ CA ಎಸ್ ಎಸ್ ನಾಯಕ್ ರವರನ್ನು ಗೌರವಿಸಲಾಯಿತು ಸಮಾರಂಭದಲ್ಲಿ ಉಡುಪಿ (ಎ ಸಿ ಸಿ ಇ ಎ) ಗೌರವಾಧ್ಯಕ್ಷ ಶ್ರೀನಾಗೇಶ್ ಹೆಗ್ಡೆ, ಲಯನ್ ವಿಜೇಯ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷರಾದ ಪಾಂಡುರಂಗ ಆಚಾರ್ಯ, ಮಾಜಿ ಅಧ್ಯಕ್ಷರಾದ ಗೋಪಾಲ್ ಭಟ್, ಹಾಗೂ ನೂರಾರು ಇಂಜಿನಿಯರ್ಸ್ ಉಪಸ್ಥರಿದ್ದರು.

ಅಧ್ಯಕ್ಷರಾದ ಆರ್ ಯೋಗೀಶ್ ಚಂದ್ರಾ ಧಾರ ಸ್ವಾಗತಿಸಿದರು , ಖಚಾಂಚಿ ಅಮಿತ್ ಅರವಿಂದ್ ನಾಯಕ್ ಕಾರ್ಯಕ್ರಮ ನಿರೂಪಣೆಗೈದರು, ಕಾರ್ಯದರ್ಶಿ ಮಹೇಶ್ ಕಾಮತ್ ವಂದಿಸಿದರು ಸಂಸ್ಥೆಯ ಸದ್ಯಸರಿಂದ ಮನೋರಂಜನೆ ಕಾರ್ಯಕ್ರಮ ಜರಗಿತು.