ಸಿಎಂ ಸಿದ್ದರಾಮಯ್ಯ ಸರಕಾರ ನಕ್ಸಲರಿಗೆ ಶರಣಾಗಿದೆ; ಸಂಸದ ಕೋಟ ಲೇವಡಿ

ಉಡುಪಿ: ನಕ್ಸಲರು ಸರಕಾರಕ್ಕೆ ಶರಣಾಗಿದ್ದಲ್ಲ, ಬದಲಾಗಿ ಸರಕಾರವೇ ನಕ್ಸಲರಿಗೆ ಶರಣಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಲೇವಡಿ ಮಾಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ‌ ಅವರು, ಶಸ್ತಾಸ್ತ್ರ ತ್ಯಜಿಸಿ ಬರುವ ನಕ್ಸಲರ ಶರಣಾಗತಿಗೆ ನಮ್ಮ ವಿರೋಧ ಇಲ್ಲ. ಆದರೆ ಈ ಸಲ ಅವರು ಶರಣಾದ ರೀತಿಯ ಬಗ್ಗೆ ವಿರೋಧ ಇದೆ. ಸರಕಾರವೇ ಅವರಿಗೆ ಶರಣಾದ ರೀತಿ ವರ್ತಿಸಿದೆ ಎಂದರು.

ಈ ಮೊದಲು ಶರಣಾದ ನಕ್ಸಲರಿಗೆ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಅವರೇ ಹೇಳಿದ್ದಾರೆ. ಜೊತೆಗೆ ನಕ್ಸಲ್ ಪ್ರದೇಶದ ಜನರಿಗೂ ಸರಕಾರದಿಂದ ಯಾವುದೇ ಪ್ರಯೋಜನ ಸಿಕ್ಕಿಲ್ಲ.ಇನ್ನು ಶರಣಾದ ನಕ್ಸಲರು ತಮ್ಮ ಶಸ್ತ್ರಾಸ್ತ್ರ ಗಳನ್ನು ಎಲ್ಲಿ ಇರಿಸಿದ್ದಾರೆ ಎಂಬ ಬಗ್ಗೆಯೂ ಚರ್ಚೆಗಳಾಗುತ್ತಿವೆ ಎಂದು ಹೇಳಿದರು.