ಉಡುಪಿ: ರುಚಿಕರ ಮಾಂಸಹಾರಿ ಖಾದ್ಯಗಳಿಗೆ ಹೆಸರುವಾಸಿಯಾಗಿರುವ “The Tawa Punjab” ರೆಸ್ಟೋರೆಂಟ್ ನಾಳೆ (ಫೆ.21) ಸಂಜೆ 6ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66, ಸಾಲಿಗ್ರಾಮ, ಕುಂದಾಪುರ ಇಲ್ಲಿ ಶುಭಾರಂಭಗೊಳ್ಳಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು, ಕಿರುತೆರೆ ನಟಿ ಗಗನ, ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ಚಿತ್ರನಟರಾದ ಅರ್ಜುನ್ ಕಾಪಿಕಾಡ್, ಕವೀಶ್ ಶೆಟ್ಟಿ, ಸಾಲಿಗ್ರಾಮ ಗಣೇಶ್ ಗ್ರಾಂಡ್ ಹೋಟೆಲ್ ನ ಅಯ್ಯಪ್ಪ, ಬಿಗ್ ಬಾಸ್ ಸೀಸನ್ 11ರ ರನ್ನರ್ಪ್ ತ್ರಿವಿಕ್ರಮ್, ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ತಿಮ್ಮಪೂಜಾರಿ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು “The Tawa Punjab” ರೆಸ್ಟೋರೆಂಟ್ ನ ಮಾಲೀಕ ವಿಜಯ ಕುಮಾರ್ ಶೆಟ್ಟಿ ಹವರಾಲು ತಿಳಿಸಿದ್ದಾರೆ.













