ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಸಂಭ್ರಮದ ಗುರುಪೂರ್ಣಿಮೆ ಆಚರಣೆ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಗುರು ಹುಣ್ಣಿಮೆ ಕಾರ್ಯಕ್ರಮ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಶಿಷ್ಯ ವರ್ಗದ ಸಹಕಾರದೊಂದಿಗೆ ಸಂಭ್ರಮದೊಂದಿಗೆ ಆಚರಿಸಲಾಯಿತು..

ಕ್ಷೇತ್ರದ ಗಾಯತ್ರಿ ಧ್ಯಾನಪೀಠದ ಕಪಿಲ ಮಹರ್ಷಿಗಳ ದಿವ್ಯ ಸನ್ನಿಧಾನದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಮನ್ಯು ನಾಮಕ ಲಕ್ಷ್ಮಿ ನರಸಿಂಹ ಯಾಗವು ಪೆರಡೂರಿನ ದಿನೇಶ್ ಅಡಿಗ ನೇತೃತ್ವದಲ್ಲಿ ಸಂಪನ್ನಗೊಂಡಿತು.ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತ ಸಮೂಹ ಶ್ರೀ ಗುರೂಜಿಯವರನ್ನು ಭಕ್ತಿ ಪೂರ್ವಕವಾಗಿ ಗುರುಪೀಠದಲ್ಲಿ ಕುಳ್ಳಿರಿಸಿ ಪಾದಪೂಜೆಗೈದರು.ಸಂಕಷ್ಟಕೊಳ್ಳಗಾದವರ ಸಂಕಷ್ಟ ನಿವಾರಿಸಿ ತನ್ನ ಸೂಕ್ತ ಮಾರ್ಗದರ್ಶನದಿಂದ ನೆಮ್ಮದಿಯ ಬಾಳ್ವೆಯನ್ನು ನಡೆಸಲು ಮಾರ್ಗದರ್ಶನ ನೀಡಿ ಸಲಹಿದ ಗುರುಗಳಿಗೆ ಶಾಲು ಹೊದಿಸಿ ಪೇಟ ತೊಡಿಸಿ ಫಲ ಪುಷ್ಪ ಕಾಣಿಕೆಯನ್ನು ಇತ್ತು ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.

ನೃತ್ಯ ಸೇವೆಗೆ ವಿಶೇಷವೆನಿಸಿದ ಕ್ಷೇತ್ರದಲ್ಲಿ ವಿವಿಧ ನೃತ್ಯಾರ್ಥಿಗಳಿಂದ ನೃತ್ಯ ಸೇವೆ ನೆರವೇರಿತು.. ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ವಿವಿಧ ಮನರಂಜನ ಕಾರ್ಯಕ್ರಮ ನೆರವೇರಿಸಿದರು.ಕುಮಾರಿ ಧನ್ಯಶ್ರೀ ಕುಮಾರಿ ಅನಗ ಜಾನಕಿ ಎಸ್ ಕ್ಷೇತ್ರದ ಸ್ವಾತಿ ಆಚಾರ್ಯ ನೀಡಿದ ನೃತ್ಯ ಸೇವೆ ಜನಾಕರ್ಷಣೆಗೊಂಡಿತು..ಅಪಾರ ಸಂಖ್ಯೆಯಲ್ಲಿ ನಡೆದ ಭಕ್ತರುಗಳಿಗೆ ಫಲ ಮಂತ್ರಾಕ್ಷತೆಯನ್ನ ನೀಡಿ ಆಶೀರ್ವದಿಸಿದರು.ಶ್ರೀ ದುರ್ಗಾ ಆದಿಶಕ್ತಿ ದೇವಿಯ ಮಹಾಪೂಜೆಯನ್ನು ಅನಿಶ್ ಆಚಾರ್ಯ ನೆರವೇರಿಸಿದರು..ಶ್ರೀಯುತ ಆನಂದ್ ಬಾಯಾರಿ ಅವರು ದುರ್ಗಾದಿ ಶಕ್ತಿ ದೇವಿಯನ್ನ ವಿಶೇಷವಾಗಿ ಅಲಂಕರಿಸಿದ್ದರು.ಕಪಿಲ ಮಹರ್ಷಿಗಳಲ್ಲಿ ವಿಶೇಷ ಅರ್ಚನೆ ಸಹಿತ ಗುರು ಪೂಜೆಯನ್ನು ಸ್ವಸ್ತಿಕ್ ಆಚಾರ್ಯ ಅವರು ನೆರವೇರಿಸಿದರು.. ಪಂಚಭಕ್ಷ ಸಹಿತವಾದ ಮಹಾ ಅನ್ನಸಂತರ್ಪಣೆ ಮೃಷ್ಟಾನ್ನ ರೀತಿಯಲ್ಲಿ ಭಕ್ತರಿಗೆ ನೀಡಲಾಯಿತು.

ಸಂಜೆ ಕಡಿಯಾಳಿ ಮಾತೃ ಭಜನಾ ಮಂಡಳಿಯ ಬಜಕರಿಂದ ಭಜನೆ ಸಂಕೀರ್ತನೆ ಸತ್ಯನಾರಾಯಣ ವ್ರತಕಥ ಪೂಜೆ ಶ್ರೀಚಕ್ರ ಮಾತಿಗೆ ಹುಣ್ಣಿಮೆಯ ವಿಶೇಷ ಪೂಜೆಗಳು ನೆರವೇರಿದವು…
ಗುರು ಪೂರ್ಣಿಮೆಯ ಪ್ರಯುಕ್ತ ಶಾಲಾ ಮಕ್ಕಳಿಗೆ ಗುರೂಜಿಯವರು ಬ್ಯಾಗ್ ವಿತರಿಸಿದರು.

ಪ್ರಾತಃಕಾಲದಿಂದಲೇ ಶ್ರೀ ಗುರೂಜಿಯವರನ್ನು ಅಭಿನಂದಿಸಲು ಭಕ್ತ ಸಮೂಹ ಕ್ಷೇತ್ರದಲ್ಲಿ ಕಿಕ್ಕಿ ರಿ ದು ನೆರೆದಿತ್ತು, ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿದರು..