ಉಡುಪಿ: ಮಣಿಪಾಲ ಕೆನರಾ ಬ್ಯಾಂಕ್ ರಸ್ತೆಯಲ್ಲಿ ಸಿಂಡಿಕೇಟ್ ಹೌಸ್ ಬಳಿ ಇದ್ದ ಬೃಹತ್ ನೀರಿನ ಟ್ಯಾಂಕ್ ನ್ನು ನಗರಸಭೆ ಸಿಬ್ಬಂದಿ ಧರೆಗೆ ಉರುಳಿಸಿದರು.
ನಗರಸಭೆಯ ಮಣಿಪಾಲ ಉಪ ಕಛೇರಿಯ ಎದುರು ಸುಮಾರು 50 ವರ್ಷಗಳಿಂದ ಮಣಿಪಾಲ ಪರಿಸರಕ್ಕೆ ನೀರುಣಿಸುತ್ತಿದ್ದ ಟ್ಯಾಂಕ್ ಇದಾಗಿತ್ತು.
ಇದು ಶಿಥಿಲಗೊಂಡಿದ್ದರಿಂದ ಹೊಸ ಟ್ಯಾಂಕ್ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಕಲ ಮುಂಜಾಗ್ರತಾ ಕ್ರಮಗಳೊಂದಿಗೆ ಓವರ್ ಹೆಡ್ ಟ್ಯಾಂಕ್ ಅನ್ನು ಧರಾಶಾಹಿ ಮಾಡಲಾಯಿತು.












