ಕಟಪಾಡಿ: ಕಟಪಾಡಿ ಬೀಡಿನ ಗದ್ದೆಯಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಕಟಪಾಡಿ ಬೀಡು ಮೂಡು-ಪಡು ಜೋಡುಕರೆ ಕಂಬಳವು ಫೆ. 22ರಂದು ನಡೆಯಲಿದೆ.
ಬೆಳಗ್ಗೆ 10.30ಕ್ಕೆ ಕಟಪಾಡಿ ಬೀಡು ಗೋವಿಂದಾಸ್ ಶೆಟ್ಟಿ ಮತ್ತು ಕಟಪಾಡಿ ಗ್ರಾ.ಪಂ. ಅಧ್ಯಕ್ಷರಾದ ಪ್ರಭಾ ಬಿ. ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ.
ಸಂಜೆ 6.30ಕ್ಕೆ ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಡಾ| ಎ.ರವೀಂದ್ರನಾಥ ಶೆಟ್ಟಿ ಕಟಪಾಡಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು,ಬಾರ್ಕೂರು ಸಂಸ್ಥಾನದ. ಶ್ರೀಸಂತೋಷ ಗುರೂಜಿ ಆಶೀರ್ವಚನ ನೀಡಲಿದ್ದಾರೆ ಎಂದು ಕಂಬಳ ವ್ಯವಸ್ಥಾಪಕರಾದ ಕಟಪಾಡಿ ಬೀಡು ಗೋವಿಂದಾಸ್ ಶೆಟ್ಟಿ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಪ್ರಧಾನ ಕಾರ್ಯದರ್ಶಿ ಕಟಪಾಡಿ ಬೀಡು ಸುಭಾಸ್ ಬಲ್ಲಾಳ್ ಅವರ ಪ್ರಕಟನೆ ತಿಳಿಸಿದೆ.












