ನುಕ್ಕುಾರು:ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ.

ಕೊಕ್ಕರ್ಣೆ:”ಎಸ್ಎಸ್ ಎಲ್ ಸಿ ಅನಂತರದ ಪಿ ಯು ಶಿಕ್ಷಣ ವಿದ್ಯಾರ್ಥಿಗಳ ಮುಂದಿನ ಉನ್ನತ ಶಿಕ್ಷಣ ಮತ್ತು ವೃತ್ತಿ ಬದುಕನ್ನು ನಿಧ೯ರಿಸುವ ಶೈಕ್ಷಣಿಕ ಹಂತವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಆಸಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಷಯಗಳ ಆಧರಿತ ಕೇೂರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಶಿಕ್ಷಕರು ಮತ್ತು ಹೆತ್ತವರು ಮಾರ್ಗದರ್ಶನ ಮಾಡಬೇಕಾದ ಅಗತ್ಯವಿದೆ.

ಬಡತನ ಎಂದಿಗೂ ವಿದ್ಯಾರ್ಜನೆಯ ಸಾಧನೆಗೆ ತೊಡಕಾಗುವ ಪರಿಸ್ಥಿತಿ ಇಂದಿಲ್ಲ.ಆದಷ್ಟು ಮಟ್ಟಿಗೆ ಚಿಕ್ಕ ವಯಸ್ಸಿನಲ್ಲಿಯೇ ಉನ್ನತ ಶೈಕ್ಷಣಿಕ ಅರ್ಹತೆಯನ್ನು ಗಳಿಸಿಕೊಂಡಿರುವುದು ಮುಂದಿನ ವೃತ್ತಿ ಬದುಕಿನ ಉನ್ನತಿಗೆ ಅದು ಅಗತ್ಯವಾದ ಶಕ್ತಿಯಾಗಿ ನಿಲ್ಲುತ್ತದೆ.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಗಳಿಸಬೇಕಾದರೆ ಪರೀಕ್ಷೆಯಲ್ಲಿ ಗಳಿಸುವ ಅಂಕಗಳೊಂದೇ ಸಾಕಾಗುವುದಿಲ್ಲ ಬದಲಾಗಿ ಕೌಶಲ್ಯ ಸಾಮರ್ಥ್ಯ, ಇಚ್ಚಾಶಕ್ತಿ, ಸಂವಹನ ಪ್ರತಿಭೆಯನ್ನು ಎಳೆಯದರಲ್ಲಿಯೇ ಸಾಧಿಸಿಕೊಂಡಾಗ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿ ಸುಲಭ ಸಾಧ್ಯವಾಗುತ್ತದೆ ಎಂದು ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ನಿವೃತ್ತ ರಾಜ್ಯ ಶಾಸ್ತ್ರ ಮುಖ್ಯಸ್ಥ ಎಂಜಿಎಂ.ಕಾಲೇಜು ಉಡುಪಿ ಇವರು ಅಭಿಪ್ರಾಯಿಸಿದರು.

ಅವರು ಕೊಕ್ಕರ್ಣೆ ಸಮೀಪದ ನುಕ್ಕೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಒಂದು ದಿನದ ಉನ್ನತ ಶಿಕ್ಷಣ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟನೆಗೈದು ವಿಶೇಷ ಉಪನ್ಯಾಸವಿತ್ತರು.

ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯಸ್ಥರಾದ ವಿಜಯಕುಮಾರ್ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಹಿರಿಯ ಶಿಕ್ಷಕರರಾದ ಸತೀಶ್.ಜಿ ಸ್ವಾಗತಿಸಿದರು.ರವಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.ಹಿರಿಯ ಶಿಕ್ಷಕಿ ಸುಜಾತ ಕುಮಾರಿ ವಂದಿಸಿದರು.ಶಿಕ್ಷಕಿಯರಾದ ಪ್ರೀತಿ ಎಂ.,ಸಪ್ನ ಗವ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಇದೇ ವೇದಿಕೆಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.