ನಗರ ನಕ್ಸಲರ ಮೇಲೆ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು: ಸುನಿಲ್ ಕುಮಾರ್ ಒತ್ತಾಯ

ಉಡುಪಿ: ಕಾಡಿನ ಒಳಗೆ ಬಂದೂಕು ಇಟ್ಟುಕೊಂಡು ಕೆಲಸ ಮಾಡುವವರು ನಕ್ಸಲರು. ಪ್ರತ್ಯಕ್ಷ ಪರೋಕ್ಷ ಸಹಕಾರ ಕೊಡುವವರು ನಗರ ನಕ್ಸಲರು. ನಗರ ನಕ್ಸಲರು ಇದು ನಕಲಿ ಎನ್ ಕೌಂಟರ್, ತಪ್ಪು ಎನ್ನಬಹುದು. ಪರವಾಗಿಲ್ಲ, ಎ ಎನ್ ಎಫ್ ಕಾರ್ಯವನ್ನು ನಾವು ಅಭಿನಂದಿಸುತ್ತೇವೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದರು.

ನಕ್ಸಲ್ ನಾಯಕ ವಿಕ್ರಮ್ ಗೌಡ ಎನ್ ಕೌಂಟರ್ ಪ್ರಕರಣವನ್ನು ನಕಲಿ ಎನ್ ಕೌಂಟರ್ ಎಂದು ಹೇಳುತ್ತಿರುವ ಎಡಪಂಥೀಯ ಸಂಘಟನೆಗಳು, ನಕ್ಸಲ್ ಹಿತೈಷಿಗಳ ಆರೋಪಕ್ಕೆ ಉಡುಪಿಯಲ್ಲಿ ಇಂದು ತಿರುಗೇಟು ಕೊಟ್ಟ ಅವರು, ಬಂದೂಕು ಹಿಡಿದುಕೊಂಡು ಕಾಡಿನ ಜನರನ್ನು ಬೆದರಿಸುವುದಕ್ಕೆ ಬಿಡಬಾರದು. ಗುಂಡಿಗೆ ಗುಂಡಿನ ಮುಖಾಂತರವೇ ಉತ್ತರ ಕೊಡಬೇಕು.

ಶರಣಾಗತಿ ಮನವಿಗಳಿಗೆ ಪೊಲೀಸ್ ಇಲಾಖೆ ಆಸ್ಪದ ನೀಡಬಾರದು. ನಗರ ನಕ್ಸಲರ ಮಾತನ್ನು ಬೆಂಬಲಿಸಬಾರದು. ಸರಕಾರ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಮೊಕದ್ದಮೆ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.