ಗಂಗೊಳ್ಳಿ ಪಂಚಾಯತ್ ಪಿಡಿಓ‌ ಉಮಾಶಂಕರ್, ದ್ವಿತೀಯ ದರ್ಜೆ ಗುಮಾಸ್ತ ಶೇಖರ ಲೋಕಾಯುಕ್ತ ಬಲೆಗೆ

ಉಡುಪಿ: ಗಂಗೊಳ್ಳಿ ಪಂಚಾಯತ್ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಪಿಡಿಓ‌ ಉಮಾಶಂಕರ್ ಹಾಗೂ ದ್ವಿತೀಯ ದರ್ಜೆ ಗುಮಾಸ್ತ ಶೇಖರ ಜಿ ಲಂಚ ಪಡೆಯುತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ.

ನೈನ್ ಲವೆನ್ ( 9/11) ಮಾಡಿಕೊಡಲು ಪಿಡಿಒ 20 ಸಾವಿರ ಲಂಚ ಕೇಳಿದ್ದ. 9/11 ಮಾಡಿಸಲು ದ್ವಿತೀಯ ದರ್ಜೆ ಗುಮಾಸ್ತ 2 ಸಾವಿರ ರೂಪಾಯಿ ಹಣ ಪಡೆದಿದ್ದ. ಒಟ್ಟು 22 ಸಾವಿರ ಲಂಚ ಪಡೆಯುತ್ತಿದ್ದಾಗ ಪಿಡಿಓ ಹಾಗೂ ಗುಮಾಸ್ತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಹಮ್ಮದ್ ಹನೀಫ್ ಎಂಬವರ ದೂರಿನ ಮೇಲೆ‌ ಈ ಕಾರ್ಯಾಚರಣೆ ನಡೆದಿತ್ತು.ಪ್ರಭಾರ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ.