ಉಡುಪಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಉದ್ಘಾಟನೆ: ಪಾಡಿಗಾರು ಲಕ್ಷ್ಮೀ ನಾರಾಯಣ ಉಪಧ್ಯಾಯ ಅವರಿಗೆ ಸನ್ಮಾನ.

ಉಡುಪಿ: ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ (ರಿ.) ನೂತನವಾಗಿ ಮಾ 1 ರಂದು ಉದ್ಘಾಟನೆ ಗೊಂಡಿತ್ತು, ಸಂಸ್ಥೆಯ ಖಜಾಂಚಿ ಅಧಿಕಾರ ಸ್ವೀಕರಿಸದ ಪರ್ವ ಕಾಲದಲ್ಲಿ ಈ ಸಂಸ್ಥೆಯ ಹುಟ್ಟು ಹಾಕುವಲ್ಲಿ ಪ್ರಮುಖರಾದ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಧ್ಯಾಯ ವೃತ್ತಿಯಲ್ಲಿ ಪ್ರಸಿದ್ಧ ಸಿವಿಲ್ ಇಂಜಿನಿಯರ್ ರಾಗಿದ್ದು ಗುತ್ತಿಗೆದಾರಾಗಿ ನೂರಾರು ಮನೆ ಕಟ್ಟಡ ನಿರ್ಮಿಸಿದ್ದಾರೆ.

ಪ್ರವೃತ್ತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಕ್ಷೇತ್ರದಲ್ಲಿ ಜ್ಯೂಯ್ನಿಯರ್ ವಿದ್ಯಾಭೂಷಣ ರೆಂದು ಪ್ರಸಿದ್ಧ ಪಡೆದು ತನ್ನದ್ದೇ ಸಂಸ್ಥೆಯ ಮುಖಂತರ 500ಕ್ಕೂ ಹೆಚ್ಚಿನ ಕಡೆಗಳಲ್ಲಿ ಕಾರ್ಯಕ್ರಮ ನೀಡಿದ್ದು, ಯಕ್ಷಗಾನದ ಚಂಡೆವಾದನ, ಛಾಯಾ ಚಿತ್ರಗಾರರಾಗಿ, ವಿವಿಧ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜ ಸೇವೆ ಸಲ್ಲಿಸಿದ್ದಾರೆ. ನಿಮ್ಮ ವಿಶಿಷ್ಟ ಸೇವೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ, ಹೊ-ಹಾರ, ಸ್ಮರಣಿಕೆ ನೀಡಿ, ಅಭಿನಂದನೆ ಪತ್ರ ನೀಡಿ ಗೌರವಿಸಲಾಯಿತು.

ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಎಮ್ ಐ ಟಿ ಯಾ ಇಂಜಿನಿಯರ್, ಪ್ರೊ.ಕಿರಣ್ ಕಾಮತ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಇಂಜಿನಿಯರ್ ನೀಲಕಂಠ ಎಮ್ ಹೆಗ್ಡೆ, ಇಂಜಿನಿಯರ್ ಕೆ. ಎಮ್ ಮೋಹನರಾಜ್, ಸಂಸ್ಥೆಯ ಅಧ್ಯಕ್ಷರಾದ ಕೆ. ರಂಜನ್, ಕಾರ್ಯದರ್ಶಿ ಕೆ. ಹರೀಶ್ , ಗಣೇಶ್ ಬೈಲೂರು, ಭರತ್ ಭೂಷಣ, ಅನಂತೇಶ್ ಆರ್ ಆಚಾರ್ಯ, ಮಹಾಬಲೇಶ್ವರ ಭಟ್, ಸಂಘದ ವಿವಿಧ ಪಧಾದಿಕಾರಿಗಳು ಉಪಸ್ಥರಿದ್ದರು.