ಉಡುಪಿ: ದಲಿತರಿಗೆ ಜಿಲ್ಲಾಡಳಿತದಿಂದ ಅಸಹಕಾರ – ದಿನಕರ್ ಬಾಬು

ಉಡುಪಿ: ಜಿಲ್ಲಾಧಿಕಾರಿಯವರು ಒಳ ಮೀಸಲಾತಿ ಕುರಿತಾದ ಸಭೆಯನ್ನು ಕೇವಲ ಸೀಮಿತ ದಲಿತ ನಾಯಕರನ್ನು ಕರೆದು ಮಾಡುತ್ತಿರುದು ಇಡೀ ದಲಿತ ಸುಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಇದರಿಂದ ಒಳ ಮೀಸಲಾತಿಯ ಬಗ್ಗೆ ಮಾಹಿತಿ ಪಡೆಯಲು ಅವಕಾಶ ಇರುವುದಿಲ್ಲ ಎಂದು ರಾಜ್ಯ ಎಸ್ ಸಿ ಮೋರ್ಚಾ ದ ಉಪಾಧ್ಯಕ್ಷ ದಿನಕರ್ ಬಾಬು ತಿಳಿಸಿದ್ದಾರೆ.

ಇದರ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮನವರಿಕೆ ಮಾಡಲು ಸಾಕಷ್ಟು ಬಾರಿ ಫೋನ್ ಕರೆ ಮಾಡಿದರು ಸ್ಪಂದನೆ ಸಿಕ್ಕಿಲ್ಲ‌. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಸರಿಯಾದ ಮಾಹಿತಿ ಕೊಡುತ್ತಿಲ್ಲ. ದಲಿತರಿಗೆ ಅಸಹಕಾರ ತೋರಿಸುತ್ತಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸುತ್ತೆವೆ ಮತ್ತು ಇದರ ವಿರುದ್ದ ಹೋರಾಟ ಮಾಡುತ್ತೆವೆ ಎಂದವರು ತಿಳಿಸಿದ್ದಾರೆ.