ಉಡುಪಿ: ಉಚಿತ ವೀಲ್ ಚೇರ್ ಹಸ್ತಾಂತರ

ಉಡುಪಿ: ಯುವ ಸೇವಾ ಸಂಘ (ರಿ ), ಟೀಮ್ ಯುವ ಟೈಗರ್ಸ್ ದುಗ್ಲಿ ಪದವು ಮಂಚಿ‌ ಹಾಗೂ ದಾನಿಗಳಾದ ನಿವೃತ ಸೇನಾನಿ ಅಶೋಕ್ ಕೋಟ್ಯಾನ್, ಸಂದ್ಯಾ ಕೋಟ್ಯಾನ್ ಹಾಗೂ ನರಸಿಂಹ ಪ್ರತಿಷ್ಠಾನ ಬೆಳ್ಳಂಪಳ್ಳಿಯ ಸ್ಥಾಪಕ ಅಧ್ಯಕ್ಷರಾದ ಉದ್ಯಮಿ ಕಾರ್ತಿಕ್ ಪ್ರಭು ಇವರ ಸಹಾಬಾಗಿತ್ವದೊಂದಿಗೆ ಉಚಿತ ವೀಲ್ ಚೇರ್ ಅನ್ನು ಕಕ್ಕುಂಜೆ ನಿವಾಸಿ ಕೃಷ್ಣ ಪೂಜಾರಿ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಉದ್ಯಮಿ ಕಕ್ಕುಂಜೆ ವಾರ್ಡ್ ನ ನಗರಸಭಾ ಸದಸ್ಯರಾದ ನಿಟ್ಟೂರ್ ಬಾಲಕೃಷ್ಣ ಶೆಟ್ಟಿ,
ಸಂಘದ ಅಧ್ಯಕ್ಷರಾದ ನರಸಿಂಹನಾಯ್ಕ್, ಕಾರ್ಯ ದರ್ಶಿ ಮಂಜು ನಾಥ್, ಕಿರಣ್ ಅಂಬಾಗಿಲು, ಸದಸ್ಯರಾದ ಕಾರ್ತಿಕ್ ಕಡೆಕಾರ್, ವಿರೇಂದ್ರ ನಿಟ್ಟೂರು, ಸಂದೇಶ್ ಕಟಪಾಡಿ, ಮಹೇಶ್ ಮಲ್ಪೆ, ಸ್ಥಾಪಕ ಅಧ್ಯಕ್ಷರಾದ ವಿನೋದ್ ಮಂಚಿ ಉಪಸ್ಥಿತರಿದ್ದರು.