ಉಡುಪಿ:ಮುಂಡಾಲ-ಆದಿದ್ರಾವಿಡ ವೇದಿಕೆಯಿಂದ ಕ್ರೀಡಾಕೂಟ ಕಾರ್ಯಕ್ರಮ ಕರಪತ್ರ ಬಿಡುಗಡೆ.

ಉಡುಪಿ: ಮುಂಡಾಲ – ಆದಿದ್ರಾವಿಡ ವೇದಿಕೆ (ರಿ.) ಉಡುಪಿ ಜಿಲ್ಲೆ ಇದರ ವತಿಯಿಂದ ದಿನಾಂಕ 4/05/2025 ರಂದು ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು ಇಲ್ಲಿ ಮುಂಡಾಲ ಹಾಗೂ ಆದಿದ್ರಾವಿಡ ಸಮಾಜ ಭಾಂಧವರಿಗಾಗಿ ಆಯೋಜಿಸಲಾದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಕರಪತ್ರ ಬಿಡುಗಡೆ ಕಾರ್ಯಕ್ರಮವು ಮಾ.30 ರಂದು ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡಿನಲ್ಲಿ ನಡೆಸಲಾಯಿತು.

ಕರಪತ್ರ ಬಿಡುಗಡೆಯನ್ನು ಕೆ.ಗೋಪಾಲ ಕಟ್ಟೆಗುಡ್ಡೆ ನಿವೃತ್ತ ಪೋಸ್ಟ್ ಮಾಸ್ಟರ್ ಇವರು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮುಂಡಾಲ – ಆದಿದ್ರಾವಿಡ ವೇದಿಕೆ ಅಧ್ಯಕ್ಷರಾದ ಚಂದ್ರ ಪಂಚವಟಿ ಇವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಮೇ4 ಬೆಳಿಗ್ಗೆ 8.30ಕ್ಕೆ ಉದ್ಘಾಟಿಸಲಾಗುವುದು. ತದನಂತರ ವಾಲಿಬಾಲ್ (ಪುರುಷರಿಗೆ) ತ್ರೋಬಾಲ್ (ಮಹಿಳೆಯರಿಗೆ) ಕುಣಿತ ಭಜನಾ ಸ್ಪರ್ಧೆ, ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಜನಪದ ಸ್ಪರ್ಧೆ ಹಾಗೂ ರಾತ್ರಿ ವಿಧಾತ್ರಿ ಕಲಾವಿದೆರ್ ಕೈಕಂಬ ಕುಡ್ಲ (ರಿ.) ದೈವರಾಜೆ ಶ್ರೀ ಬಬ್ಬು ಸ್ವಾಮಿ ಭಕ್ತಿ ಪ್ರಧಾನ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ದಿನಕರ ಬಾಬು, ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಕಪ್ಪೆಟ್ಟು, ಸಮಿತಿ ಸದಸ್ಯರಾದ ಗಿರಿಧರ್ ಬ್ರಹ್ಮಾವರ, ಕೆ. ಚಂದ್ರ, ಅಭಿಜಿತ್, ಉಮೇಶ್ ನೇಜಾರ್, ರವಿ ಅಂಬಲಪಾಡಿ, ಕೃಷ್ಣ ಕಟ್ಟೆಗುಡ್ಡೆ, ಅನಿಲ್ ಬ್ರಹ್ಮಾವರ, ವಿನೋದ್ ಕಟ್ಟೆಗುಡ್ಡೆ ಉಪಸ್ಥಿತರಿದ್ದರು. ಕೋಶಾಧಿಕಾರಿ ಬಿ. ರಾಜೇಂದ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.