ಉಡುಪಿ: ಉಡುಪಿಯ ಹೋಟೆಲ್ ಶಾರದಾ ಇಂಟರ್ನ್ಯಾಷನಲ್ ನ ಮಾಲೀಕರಾಗಿದ್ದಂತಹ ಕ್ರೀಡಾ ಪ್ರೋತ್ಸಾಹಕರು ಆಗಿದ್ದ ದಿವಂಗತ ಸುಧಾಕರ ಶೆಟ್ಟಿ ಯವರ ಸ್ಮರಣಾರ್ಥವಾಗಿ, “ತಾಂಡವ’ ಎಂಬ ಬಳಗವು 2025 ರ ಮೇ ತಿಂಗಳಿನಲ್ಲಿ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ.
ಈ ಪಂದ್ಯಾವಳಿಯು ಮೇ 9, 10 ಮತ್ತು 11 ರಂದು, ಉಡುಪಿಯ ಮಹಾತ್ಮಗಾಂಧಿ ಬಯಲು ರಂಗಮಂದಿರದ ಬೀಡಿನಗುಡ್ಡೆಯಲ್ಲಿ ನಡೆಯಲಿದೆ.
ಪಂದ್ಯಾವಳಿಯ ವಿಜೇತ ತಂಡಕ್ಕೆ 2 ಲಕ್ಷ ರೂ. ಮೊತ್ತದ ಬಹುಮಾನ ಹಾಗೂ ರನ್ನರ್ ಅಪ್ ತಂಡಕ್ಕೆ 1 ಲಕ್ಷ ರೂ. ಹಾಗೂ ಟ್ರೋಫಿ ಪ್ರದಾನಿಸಲಾಗುತ್ತದೆ. 3 ನೇ ಮತ್ತು 4 ನೇ ಸ್ಥಾನಗಳನ್ನೂ ಗಳಿಸುವ ತಂಡಗಳಿಗೆ ಸಮಾಧಾನಕರ ಬಹುಮಾನಗಳು ನೀಡಲಾಗುತ್ತವೆ.
ಪಾಲ್ಗೊಳ್ಳುವ ಆಟಗಾರರಿಗೆ ಜೆರ್ಸಿ, ಶಾರ್ಟ್ಸ್ ಮತ್ತು ಊಟ ಉಪಚಾರವನ್ನು ಆಯೋಜಕರು ಒದಗಿಸಲಿದ್ದಾರೆ.
*ಸ್ಪೋರ್ಟ್ಸ್ ಕನ್ನಡ ಈ ಟೂರ್ನಿಯ ನೇರಪ್ರಸಾರವನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ, ಸಚಿನ್ – 8197717720, ಅಶೋಕ್ – 9008103060, ಜಯರಾಜ್ 7975768329 ಇವರನ್ನು ಸಂಪರ್ಕಿಸಬಹುದು.












