ಉಡುಪಿ: ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಹೊರಟ ಶ್ರೀ ಬಬ್ಬುಸ್ವಾಮಿ ಪರಿವಾರ ದೈವಗಳ ಬೆಳ್ಳಿಯ ಪರಿಕಗಳ ಮೆರವವಣಿಗೆಯಲ್ಲಿ ಬ್ರಿಟನ್ನ ಪ್ರಜೆಗಳಾದ ಫಿಲ್ಪಾರ್ಕ್ ಮತ್ತು ಚಾರ್ಲ್ಸ್ ಅವರು ನಮ್ಮ ತುಳುನಾಡಿನ ಐತಿಹಾಸಿಕ ಕುಣಿತ ಭಜನೆಗೆ ಹೆಜ್ಜೆ ಹಾಕಿ ಸಂಭ್ರಮದಿಂದ ಕುಣಿದರು.
ಸಂಸ್ಕೃತಿಯ ಶ್ರೇಷ್ಠತೆ, ತುಳುನಾಡಿನ ಸಮೃದ್ಧ ಪರಂಪರೆ ಮತ್ತು ಭಕ್ತಿಯ ಲಯದೊಂದಿಗೆ ಜಗತ್ತಿನ ಪ್ರಜೆಗಳು ಹೀಗೆ ಕುಣಿದದ್ದು ಜಗತ್ತಿನಲ್ಲಿ ನಾವೆಲ್ಲರೂ ಒಂದೇ ಎನ್ನುವ ಸೌಹಾರ್ದ ಭಾವವನ್ನು ಮೂಡಿಸಿದ್ದು ಖುಷಿಯ ಸಂಗತಿ.












