ಬಂಟರ ಅಭಿವೃದ್ದಿ ನಿಗಮ ಸ್ಥಾಪನೆ ಬಗ್ಗೆ ಮುಂದಿನ ಬಜೆಟ್ ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಉಡುಪಿ: “ನಿಕ್ಲೆಗ್ ಎನ್ನ ನಮಸ್ಕಾರ. ಎಂಚ ಉಲ್ಲರ್?” ಎಂದು ತುಳುವಿನಲ್ಲಿ ಮಾತನ್ನು ಶುರು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮ್ಮೇಳನಕ್ಕೆ ಕರ್ನಾಟಕ ಸರ್ಕಾರ, ಮತ್ತು ರಾಜ್ಯದ ಜನತೆಯ ಶುಭಾಶಯ ಕೋರಿದರು. ಬಂಟರ ಅಭಿವೃದ್ದಿ ನಿಗಮ ಮಾಡುವ ಭರವಸೆಯನ್ನು ಕರಾವಳಿ ಕರ್ನಾಟಕದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದು, ಮುಂದಿನ ಬಜೆಟ್ ನಲ್ಲಿ ಅದನ್ನು ಅಧಿಕೃತವಾಗಿ ಘೋಷಣೆ ಮಾಡುತ್ತೇನೆ ಎಂದರು. ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವ ಬಂಟರ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂತೋಷದಿಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಗವಹಿಸಿದ್ದೇನೆ. ಬಂಟರು ಪ್ರಾಚೀನ ಕಾಲದಿಂದಲೂ […]
ವಿಶ್ವ ಬಂಟರ ಸಮ್ಮೆಳನ-2023 ಕ್ಕೆ ವಿದ್ಯುಕ್ತ ಚಾಲನೆ; ಆಕರ್ಷಕ ಮೆರವಣಿಗೆ

ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ) ಆಯೋಜಿಸಿರುವ ವಿಶ್ವ ಬಂಟರ ಸಮ್ಮೆಳನ-2023 ಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್, ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಬಂಟರ ಸಂಘದ ಪದಾಧಿಕಾರಿಗಳು, ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು, ಬಾರ್ಕೂರು ಸಂಸ್ಥಾನದ ಸಂತೋಷ್ ಭಾರತೀ ಸ್ವಾಮಿಗಳು, ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣ, ಶಾಸಕ ಯಶ್ ಪಾಲ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು. ಉದ್ಘಾಟನೆಗೂ ಮುನ್ನ ಬೋರ್ಡ್ ಹೈಸ್ಕೂಲ್ ನಿಂದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದವರೆಗೆ […]
ಸಮಾಜದ ಸಮಸ್ತರನ್ನೂ ಒಗ್ಗೂಡಿಸಿ ಸಮುದಾಯೋನ್ನತಿಯಿಂದ ರಾಷ್ಟ್ರೋನ್ನತಿಯತ್ತ ಸಾಗುವ ವಿಶ್ವ ಬಂಟರ ಸಮ್ಮೇಳನ-2023

ಅವಿಭಜಿತ ದ.ಕ ಜಿಲ್ಲೆಯ ಅನಭಿಷಿಕ್ತ ದೊರೆಗಳಾಗಿ ಮೆರೆದ ಜನನಿ, ಜನ್ಮ ಭೂಮಿ ಮತ್ತು ಕರ್ಮಭೂಮಿಗೆ ಕೀರ್ತಿ ತಂದ ಬಾವ, ಗುತ್ತು, ಬರ್ಕೆ, ಬೂಡಿನ ಗತ್ತು ಗೈರತ್ತಿನ ಕ್ಷಾತ್ರ ತೇಜದ ವೈಶ್ಯ ವರ್ಣದ ಸಮುದಾಯ ಬಂಟ ಯಾನೆ ನಾಡವರದ್ದು. ಬಂಟ ಅಂದರೆ ಸಚಿವ- ಮಂತ್ರಿ- ಭಟ ಎಂಬುದಾಗಿಯೂ, ಅರಸೊತ್ತಿಗೆಯ ಕಾಲದಲ್ಲಿ ಆಳುಪ ಅರಸರಾಗಿ, ಸಾಮಂತಿಕೆಯ ಕಾಲದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದವರು. ಛಲ, ಬುದ್ದಿ ಬಲ- ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಇನ್ನೊಂದು ಹೆಸರಿದ್ದರೆ ಅದು ಬಂಟರದ್ದು. ಆಡು ಮುಟ್ಟದ ಸೊಪ್ಪಿಲ್ಲ, […]
ಅ. 28- 29 ರಂದು ವಿಶ್ವವೇ ಭಾಗವಹಿಸಲಿರುವ ವಿಶ್ವ ಬಂಟರ ಸಮ್ಮೇಳನಕ್ಕೆ ಭರದ ಸಿದ್ದತೆ

ಉಡುಪಿ: ವಿಶ್ವದಾದ್ಯಂತದ ಬಂಟರು ಒಂದೇ ವೇದಿಕೆಯಲ್ಲಿ ಭಾಗವಹಿಸಲಿರುವ ವಿಶ್ವ ಬಂಟರ ಸಮ್ಮೇಳನ-2023 ಕ್ಕೆ ಭರದ ಸಿದ್ದತೆಗಳು ನಡೆಯುತ್ತಿವೆ. ಅ.28 ರಂದು ಅಜ್ಜರಕಾಡು ಕ್ರೀಡಾಂಗಣದಲ್ಲಿ ವಿಶ್ವ ಬಂಟರ ಕ್ರೀಡಾಕೂಟ ಜರುಗಲಿದ್ದು, ಅ.29 ರಂದು ಅಮ್ಮಣ್ಣಿ ರಾಮಣ್ಣ ಶೆಟ್ತಿ ತೆರೆದ ಮೈದಾನದಲ್ಲಿ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳು ನಡೆಯಲಿದ್ದು, ಗುತ್ತಿನ ಶೈಲಿಯ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಮಂತ್ರಿ ಡಾ. ಜಿ ಪರಮೇಶ್ವರ್, ರಾಜ್ಯ ಹಾಗೂ ಕೇಂದ್ರ ಸರಕಾರದ ಸಚಿವರು, ಸಂಸದರು, ಶಾಸಕರು, ವಿವಿಧ […]