ಅಮ್ಮ ವಿಥ್ ಕಂದಮ್ಮ ಸೀಸನ್-3 ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ

ಉಡುಪಿ: ಕರಾವಳಿಯ ಅಚ್ಚುಮೆಚ್ಚಿನ ಮತ್ತು ವಿಶ್ವಾಸಾರ್ಹ ಜ್ಯುವೆಲ್ಲರ್ಸ್ ಗಳಾದ ಭೀಮಾ ಜ್ಯುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ ವಸ್ತುನಿಷ್ಠ ವರದಿಗಾರಿಕೆಗೆ ಹೆಸರುವಾಸಿಯಾಗಿರುವ ಉಡುಪಿ ಎಕ್ಸ್ಪ್ರೆಸ್ ಡಿಜಿಟಲ್ ಮಾಧ್ಯಮವು ಕಳೆದ ವರ್ಷ ನ.14-ಮಕ್ಕಳ ದಿನಾಚರಣೆಯಂದು ವಿನೂತನ ಫೋಟೋ ಕಾಂಟೆಸ್ಟ್ ಅಮ್ಮ ವಿಥ್ ಕಂದಮ್ಮ ಸೀಸನ್-3 ಅನ್ನು ಆಯೋಜಿಸಿದ್ದು, ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಮೂರು ಫೋಟೋ ಮತ್ತು ತೀರ್ಪುಗಾರರ ಮೆಚ್ಚುಗೆ ಪಡೆದ ಮೂರು ಫೋಟೋಗಳಿಗೆ ಬಹುಮಾನವನ್ನು ಘೋಷಿಸಿತ್ತು. ಒಟ್ಟು ಆರು ಅಮ್ಮ ಮತ್ತು ಕಂದಮ್ಮ ಜೋಡಿಗಳಿಗೆ ಬಹುಮಾನ ವಿತರಣೆ […]

ಮಂಗಳೂರು: ಉಡುಪಿ ಎಕ್ಸ್ಪ್ರೆಸ್ ‘ಸಹಕಾರ ಸೌರಭ ‘ ವಿಶೇಷ ಸಂಚಿಕೆ ಬಿಡುಗಡೆ

ಮಂಗಳೂರು: ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಉಡುಪಿ ಎಕ್ಸ್ಪ್ರೆಸ್ ವೆಬ್ ಸೈಟ್ ನ ‘ಸಹಕಾರ ಸೌರಭ’ ವಿಶೇಷ ಸಂಚಿಕೆಯನ್ನು ಗುರುವಾರದಂದು ಎಸ್.ಸಿ. ಡಿ.ಸಿ.ಸಿ ಬ್ಯಾಂಕ್ ನ  ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್, ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಬ್ಯಾಂಕ್ ನ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ, ಜೈರಾಜ್ ಬಿ ರೈ, ರವೀಂದ್ರ […]

ಆಗಸ್ಟ್ 7: ವಿದ್ಯಾರ್ಥಿ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಪ್ರಗತಿ ಅಸೋಸಿಯೇಟ್ ಪ್ರಸ್ತುತ ಪಡಿಸುತ್ತಿದೆ 5 ನೇ ಮಹಾ ಉದ್ಯೋಗ ಮೇಳ

ಉಡುಪಿ: ಸರಿಯಾದ ಉದ್ಯೋಗಕ್ಕಾಗಿ ಅಲೆದಾಡುತ್ತಿರುವವರಿಗೆ ಅಥವಾ ಹೊಸ ವೃತ್ತಿ ಜೀವನದ ಹುಡುಕಾಟದಲ್ಲಿರುವವರಿಗೆ ಪ್ರಗತಿ ಅಸೋಸಿಯೇಟ್ ಪ್ರಸ್ತುತ ಪಡಿಸುತ್ತಿದೆ 5 ನೇ ಮಹಾ ಉದ್ಯೋಗ ಮೇಳ. ಆಗಸ್ಟ್ 7 ಭಾನುವಾರದಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆವರೆಗೆ ನಗರದ ಕಿದಿಯೂರು ಹೋಟೆಲಿನ ಪವನ್ ರೂಫ್ ಟಾಪ್ ನಲ್ಲಿ ಉದ್ಯೋಗ ಮೇಳ ನಡೆಯಲಿದ್ದು, ಸ್ಥಳೀಯ ಉದ್ಯಮಗಳು ಹಾಗೂ ಕೈಗಾರಿಕೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ಸ್ಥಳೀಯ ವಿದ್ಯಾರ್ಥಿಗಳು ಹಾಗೂ ವೃತ್ತಿ ಅನ್ವೇಷಕರು ಸಂದರ್ಶನದಲ್ಲಿ ಭಾಗವಹಿಸಿ ಕನಸಿನ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ […]