ಉಡುಪಿ: ರೋಗಿಯನ್ನು ಕರೆದೊಯ್ಯಲು ಪರದಾಡಿದ ಕುಟುಂಬಕ್ಕೆ ಆಸರೆಯಾದ ವಿಶು ಶೆಟ್ಟಿ ಅಂಬಲಪಾಡಿ

ಉಡುಪಿ: ಜಿಲ್ಲಾಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಿಡುಗಡೆಗೊಂಡು ಮನೆಗೆ ರೋಗಿಯನ್ನು ಕರೆದೊಯ್ಯಲು ಅಂಬುಲೆನ್ಸ್ ಗೂ ಹಣವಿಲ್ಲದೆ ಪರದಾಡಿದ ಘಟನೆ ನಡೆದಿದೆ. ಆಂಬುಲೆನ್ಸ್ ನ ಅಗತ್ಯಕ್ಕೆ ರೋಗಿಯ ಸಂಬಂಧಿಕರು ಕಷ್ಟಪಡುವಂತಾಗಿತ್ತು. ಈ ವಿಷಯ ತಿಳಿದು ಸ್ಪಂದಿಸಿದ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಆಂಬುಲೆನ್ಸ್ ನ ವೆಚ್ಚ ಭರಿಸಿ ಸ್ಪಂದಿಸಿದರು. ರೋಗಿ ಪೀನ (70) ಅಮಾವಾಸ್ಯೆ ಬೈಲು ಮೂಲದವರಾಗಿದ್ದು, ರೋಗಿಯು ಎದ್ದೇಳುವ ಪರಿಸ್ಥಿತಿಯಲ್ಲಿಯೂ ಇರಲಿಲ್ಲ. ನನ್ನ ಮಾವ ಅವಿವಾಹಿತರಗಿದ್ದು ದಲಿತ ಸಮುದಾಯದವರಾದ ನಮ್ಮಲ್ಲಿ ಆಂಬುಲೆನ್ಸ್ ಬಾಡಿಗೆ ನೀಡಲು ಚಿಕ್ಕಾಸು ಕೂಡಾ ಇಲ್ಲ. […]