ಜಾತಿಗಣತಿ ವರದಿ ಓದದೇ ವಿರೋಧ ಮಾಡಬೇಡಿ: ಕೆ. ಜಯಪ್ರಕಾಶ್ ಹೆಗ್ಡೆ

ಉಡುಪಿ: ಜಾತಿಗಣತಿ ವರದಿ ಓದದೇ ವಿರೋಧ ಮಾಡಬೇಡಿ. ವರದಿ ಓದಿದ ಬಳಿಕ ಬದಲಾವಣೆಗಳಿದ್ದರೆ ಸೂಚಿಸಿ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.ಜಾತಿಗಣತಿ ವರದಿ ಜಾರಿ ವಿಚಾರದ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಫೆಬ್ರವರಿ 29ಕ್ಕೆ ಅಧ್ಯಕ್ಷನಾಗಿ ನನ್ನ ಅವಧಿಯ ಕೊನೆಯ ದಿನವಾಗಿತ್ತು. ಅದೇ ದಿನ ಮುಖ್ಯಮಂತ್ರಿಗಳಿಗೆ ವರದಿ ಹಸ್ತಾಂತರಿಸಿದ್ದೇನೆ. ವರದಿ ಬಹಿರಂಗ ಮಾಡುವಂತೆ ಇಷ್ಟರವರೆಗೆ ನಾವು ಒತ್ತಡ ಹಾಕುತ್ತಿದ್ದೆವು. ಈಗ ಹಿಂದುಳಿದ ವರ್ಗದವರು ಒತ್ತಡ ಹಾಕುತ್ತಿದ್ದಾರೆ. ಮೊನ್ನೆ ಮುಖ್ಯಮಂತ್ರಿಗಳು […]