ಸರಿಗಮಪ ರಿಯಾಲಿಟಿ ಶೋ ಫೈನಲ್‌ ಪ್ರವೇಶಕ್ಕೆ ಟಿಆರ್ಪಿ‌ ಮಾನದಂಡವಾಯ್ತೆ?:ನೈಜ ಪ್ರತಿಭೆಗಳಿಗೆ ಮನ್ನಣೆ ಕೊಡದ ಚಾನೆಲ್, ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಗರಂ

ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಸರಿಗಮಪ ರಿಯಾಲಿಟಿ ಶೋ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಸಮದಾನ ವ್ಯಕ್ತವಾಗಿದ್ದು, ಕೇವಲ‌ ಟಿಆರ್ಪಿಯೇ ಮಾನದಂಡವೇ  ಎಂದು‌ ಹಲವರು ಪ್ರಶ್ನಿಸಿದ್ದಾರೆ. ಸರಿಗಮಪದಲ್ಲಿ ಫೈನಲ್ ಗೆ ಆಯ್ಕೆಯಾಗದ ಸ್ಪರ್ಧಿಗಳನ್ನು ಕಂಡು ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೈಜ ಗಾಯಕರನ್ನು ಅಂತಿಮ ಘಟ್ಟಕ್ಕೆ ಆಯ್ಕೆ ಮಾಡದೇ ವಿನ್ನರ್ ಯಾರೆಂದು ಮೊದಲೇ ಫಿಕ್ಸ್ ಆಗಿರುತ್ತದೆ ಎನ್ನುವ ವಿಚಾರ ಹರಿದಾಡುತ್ತಿದೆ. ಎಲ್ಲವೂ ಮಾರ್ಕೆಟಿಂಗ್ ಗುರು: ತೀರ್ಪುಗಾರರಿಗೆ ಗೊತ್ತಾಗದ ಹಾಗೆ ಮಾರ್ಕೆಟಿಂಗ್ ಅನ್ನೋ ಗುಪ್ತಗಾಮಿನಿಯೊಂದು […]