ಡಿ.14 ರಂದು ಕಾಳು ಮೆಣಸು ಅಡಿಕೆ ಕಾಫಿ ಬೆಳೆಗಾರರಮಾಹಿತಿ ಶಿಬಿರ ಮತ್ತು ಸಮಾವೇಶ

ಪುತ್ತೂರು: ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಕಾಳು ಮೆಣಸು, ಅಡಿಕೆ ಮತ್ತು ಕಾಫಿ ಬೆಳೆಗಾರರ ಮಾಹಿತಿ ಶಿಬಿರ ಮತ್ತು ಸಮಾವೇಶವು ಡಿಸೆಂಬರ್ 14ರಂದು ಪುತ್ತೂರಿನ ದರ್ಬೆಯಲ್ಲಿರುವ ಸುಭದ್ರಾ ಸಭಾ ಮಂದಿರದಲ್ಲಿ ನಡೆಯಲಿದೆ. ಕಾಳುಮೆಣಸು ಕೊಯ್ಲು-ಸಂಸ್ಕರಣೆ, ಕಾಫಿ ಕೊಯ್ಲು- ಸಂಸ್ಕರಣೆ, ದೂಪದ ಗಿಡದಲ್ಲಿ ಕಾಳುಮೆಣಸು ಕೃಷಿ ಮತ್ತು ಅಡಿಕೆ ಎಲೆ ಚುಕ್ಕಿ ರೋಗ ಹತೋಟಿ ಮತ್ತು ನಿರ್ಮೂಲನೆ ಕುರಿತಂತೆ ತಜ್ಞರು ಮಾಹಿತಿ ನೀಡಲಿದ್ದಾರೆ.