ಕೃಷಿ-ಗೋ ಸಂಸ್ಕೃತಿಯ ಸ್ವರ್ಗವಾದ ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆ.19 ರಿಂದ ಶ್ರೀಮನ್ನಾಗಮಂಡಲ

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೆಲೆಗೊಂಡಿರುವ ಮುನಿಯಾಲು ಸಂಜೀವಿನಿ ಗೋಧಾಮವು ಕೃಷಿ, ಪ್ರಕೃತಿ ಮತ್ತು ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಸಮನ್ವಯಗೊಳಿಸಿದ ವಿಶಿಷ್ಟ ಕೇಂದ್ರವಾಗಿ ರೂಪುಗೊಂಡಿದೆ. ಪುರಾತನ ಶೈಲಿಗೆ ಆಧುನಿಕ ಸ್ಪರ್ಶ ನೀಡಿ ನಿರ್ಮಿಸಲಾದ ಈ ಗೋಧಾಮವು ಭಾರತೀಯ ಗೋತಳಿಗಳ ಸಂರಕ್ಷಣೆ, ಪಾರಂಪರಿಕ ಕೃಷಿ ವಿಧಾನಗಳ ಪುನರುಜ್ಜೀವನ ಮತ್ತು ಯುವ ಸಮುದಾಯವನ್ನು ಕೃಷಿಯತ್ತ ಆಕರ್ಷಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. “ಪ್ರಕೃತಿಯಿಂದ ಪ್ರಕೃತಿಗೆ” ಎಂಬ ವಿನೂತನ ಪರಿಕಲ್ಪನೆಯೊಂದಿಗೆ ಗೋಧಾಮವು ಕೃಷಿ ಆಸಕ್ತರನ್ನಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿಯೂ ಗಮನ ಸೆಳೆಯುತ್ತಿದೆ. ಫೆಬ್ರವರಿ 19ರಿಂದ 21ರವರೆಗೆ […]