ನಿಟ್ಟೆ: ಇಂಟರ್‌ನ್ಯಾಷನಲ್ ಫ್ರೆಂಡ್ಶಿಪ್ ಸೀರೀಸ್’: ಜಿಂಬಾಬ್ವೆ ತಂಡ ಚ್ಯಾಂಪಿಯನ್

ಕಾರ್ಕಳ: “ಮಾತೃಭೂಮಿಯ ಬಗೆಗೆ ನಮ್ಮಲ್ಲಿ ಪ್ರೀತಿ ಹಾಗೂ ಹೆಮ್ಮೆಯ ಮನೋಭಾವವಿರಬೇಕು. ಯಾವುದೇ ಸ್ಪರ್ಧೆಯಾದರೂ ಸೋಲು, ಗೆಲುವು ಸಾಮಾನ್ಯ. ಕ್ರೀಡಾಪಟುಗಳು ತಮ್ಮ ರಾಜ್ಯ/ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವೆನು ಎಂಬ ಚಿಂತನೆಯೊಂದಿಗೆ ಜವಾಬ್ದಾರಿಯುತ ಆಟವಾಡಬೇಕು” ಎಂದು ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎನ್.ವಿನಯ ಹೆಗ್ಡೆ ಅಭಿಪ್ರಾಯಪಟ್ಟರು. ಅವರು ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಡಿ.೯ ರಿಂದ ೧೨ರವರೆಗೆ ಕರಾವಳಿ ಕ್ರಿಕೆಟ್ ಅಕಾಡೆಮಿಯು ಸಂಘಟಿಸಿದ ೧೮ ವರ್ಷದ ಕೆಳಗಿನ ವಯೋಮಿತಿಯ ನಿಟ್ಟೆ ಇಂಟರ್‌ನ್ಯಾಷನಲ್ ಫ್ರೆಂಡ್ಶಿಪ್ ಸೀರೀಸ್’ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. […]