ಅಂತ್ಯವಾಗಲಿದೆಯೇ ಇರಾನ್- ಅಮೇರಿಕಾ, ಇಸ್ರೇಲ್ ಯುದ್ಧ? ಮಹತ್ವದ ನಿರ್ಧಾರ ಬಿಚ್ಚಿಟ್ಟ ಇರಾನ್ ಅಧ್ಯಕ್ಷ!

ಇರಾನ್ ದೇಶದ ವಿರುದ್ಧ ಜಾಗತಿಕ ಮಟ್ಟದಲ್ಲಿ ಅಮೇರಿಕಾ ಹಾಗೂ ಇಸ್ರೇಲ್ ನಡೆಸುತ್ತಿರುವ ಯುದ್ಧ ಇರಾನ್ ಅಧ್ಯಕ್ಷರ ಈ ಒಂದು ನಿರ್ಧಾರದಿಂದ ಆತಂಕಕ್ಕೀಡುಮಾಡಿದ್ದು, ಜಗತ್ತಿನ ಉಳಿವು-ಅಳಿವಿನ ಪ್ರಶ್ನೆ ಎದುರಾಗಿದೆ. ಟ್ರಂಪ್ ನೀಡಿದ್ದ ಗಡುವು ಮುಗಿಯುತ್ತಾ ಬಂದಂತೆ ಇರಾನ್ ಅಧ್ಯಕ್ಷ ಅಪಾಯಕಾರಿ ನಿಲುವು ತಾಳಿದ್ದಾರೆ. ಪ್ರಾಣ ತ್ಯಾಗಕ್ಕೆ ಸಿದ್ಧ ಎಂದ ಇರಾನ್ ಅಧ್ಯಕ್ಷ  “ನಾನು ಸೇರಿದಂತೆ 14 ಮಿಲಿಯನ್‌ಗಿಂತ ಹೆಚ್ಚು ಇರಾನಿಯನ್ನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದೇವೆ, 14 ಮಿಲಿಯನ್‌ಗಿಂತ ಹೆಚ್ಚು ಹೆಮ್ಮೆಯ ಇರಾನಿಯನ್ನರು ಇರಾನ್ ರಕ್ಷಣೆಗಾಗಿ ತಮ್ಮ […]

ಕರ್ತವ್ಯಪಥದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ ವಸುಪ್ರದಾ ಇವರಿಗೆ ಅಭಿನಂದನೆ

ಉಡುಪಿ : ರಂಗಭೂಮಿ ಉಡುಪಿ ಇದರ ರಂಗಭೂಮಿ ರಂಗೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ, ನವದೆಹಲಿಯ ಕರ್ತವ್ಯಪಥದಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ತಂಡದೊಂದಿಗೆ ಭಾಗವಹಿಸಿ ಭರತನಾಟ್ಯ ಪ್ರದರ್ಶನವನ್ನು ನೀಡಿ ಮೆಚ್ಚುಗೆಗಳಿಸಿದ ವಸುಪ್ರದಾ ಇವರನ್ನು ಉಡುಪಿ ಸಮಸ್ತ ನಾಗರಿಕ ಪರವಾಗಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ರಘುಪತಿ ಭಟ್, ನಾಡೋಜ ಜಿ.ಶಂಕರ್, ಎಚ್.ಎಸ್.ಬಲ್ಲಾಳ್,ತ ಲ್ಲೂರು ಶಿವರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಇಂದಿನಿಂದ ವಾರದಲ್ಲಿ ಐದು ದಿನ ಸಾರ್ವಜನಿಕ ಭೇಟಿಗೆ ತೆರೆದಿರಲಿದೆ ರಾಷ್ಟ್ರಪತಿ ಭವನ

ನವದೆಹಲಿ: ವಾರದ ದಿನಗಳಲ್ಲಿ ಜನರಿಗೆ ಹೆಚ್ಚು ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುವ ಉದ್ದೇಶದಿಂದ ರಾಷ್ಟ್ರಪತಿ ಭವನವನ್ನು ಗುರುವಾರದಿಂದ ವಾರದಲ್ಲಿ ಐದು ದಿನಗಳ ಕಾಲ ಸಾರ್ವಜನಿಕ ಭೇಟಿಗಾಗಿ ತೆರೆಯಲಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗವು ಕಡಿಮೆಯಾಗುತ್ತಿದ್ದಂತೆ, ಅಧಿಕಾರಿಗಳು ಮಾರ್ಗಸೂಚಿಗಳನ್ನು ಸಡಿಲಿಸಿದ್ದಾರೆ ಮತ್ತು ಎರಡು ದಿನ ಮಾತ್ರ ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸಕ್ಕೆ ಸಾರ್ವಜನಿಕ ಭೇಟಿಗೆ ಅವಕಾಶ ನೀಡಿದ್ದನ್ನು ಹೆಚ್ಚಿಸಿ ಐದು ದಿನಗಳವರೆಗೆ ಏರಿಸಿದ್ದಾರೆ. ಗೆಜೆಟೆಡ್ ರಜಾದಿನಗಳನ್ನು ಹೊರತುಪಡಿಸಿ,ಅಧ್ಯಕ್ಷರ ನಿವಾಸ ಸ್ಥಾನದ ಸರ್ಕ್ಯೂಟ್ 1 ರ ಗೈಡ್ ಯುಕ್ತ ಸಾರ್ವಜನಿಕ ಪ್ರವಾಸಗಳನ್ನು […]