ಮಹಾತ್ಮರು ನಡೆದಾಡಿದ ಪುಣ್ಯ ಭೂಮಿ ನಮ್‌ ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಕ್ಕೆ ಲಾವಣ್ಯ ಬರೆದ ವಿಶೇಷ ಬರಹ

ನಮ್ಮೂರಾದ ಕುಂದಾಪುರವು ತನ್ನ ವಿಶಿಷ್ಟವಾದ ಭಾಷೆ, ಪ್ರಾಕೃತಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಮತ್ತು ಆಹಾರ ವೈಶಿಷ್ಟ್ಯತೆಯಿಂದ ಪ್ರವಾಸಿಗರನ್ನು ಆಕರ್ಷಿಸುವುದಲ್ಲದೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಒಳಗೊಂಡು ಕರ್ನಾಟಕ ರಾಜ್ಯದಲ್ಲಿ ಎಲ್ಲರಿಂದಲೂ ಗುರುತಿಸಲ್ಪಡುವ ತಾಲೂಕಾಗಿದೆ. ಇದರ ಜೊತೆಗೆ ವಿಶ್ವ ಕುಂದಾಪುರ ದಿನವನ್ನು ಇಡೀ ದೇಶದಾದ್ಯಂತ ಆಚರಿಸುತ್ತಾರೆ ಎನ್ನುವುದು ನಮಗೆ ಅಭಿಮಾನದ ಸಂಗತಿ. ಹಾಗಾಗಿ ವಿಶ್ವ ಕುಂದಾಪುರ ದಿನದ ಸಲುವಾಗಿ ಈ ಲೇಖನ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿರುವುದಲ್ಲ. ಲಕ್ಷಾಂತರ ಜನರ ತ್ಯಾಗ, ಹೋರಾಟ, ಬಲಿದಾನ ಇದರ […]