ಕುಂದಾಪುರ:ನಿತ್ಯ ಬಳಕೆ ವಸ್ತುಗಳ ಕಿಟ್ ವಿತರಣೆ
ಕುಂದಾಪುರ: ಕೊರೋನಾ ಪಿಡುಗಿನ ಹಿನ್ನೆಲೆಯಲ್ಲಿ ಲಾಕ್ಡೌನ್ಗೆ ಒಳಗಾಗಿ ಜನ ಅತಂತ್ರರಾಗಿ ಕಂಗಾಲಾಗಿರುವ ಸಂದರ್ಭ ಆಯಾಯ ಗ್ರಾಮಗಳಲ್ಲಿ ಉದಾರ ದಾನಿಗಳಿಂದ ನಿತ್ಯ ಬಳಕೆಗೆ ಬೇಕಿರುವ ಆಹಾರ ಸಾಮಾಗ್ರಿಗಳ ಕಿಟ್ ಹಂಚಿ ಮಾನವಿಯ ಮೌಲ್ಯವನ್ನು ಎತ್ತಿಹಿಡಿದು ಕಡುಬಡವರುಗಳ ಹಸಿವು ನೀಗಿಸುವ ಕೆಲಸವಾಗುತ್ತಿದೆ. ಈ ನಿಟ್ಟಿನಲ್ಲಿ ತಲ್ಲೂರು ಗ್ರಾಮ ಪಂಚಾಯತ್ ಸದಸ್ಯ, ನೀರುನೈರ್ಮಲ್ಯ ಸಮಿತಿಯ ಅಧ್ಯಕ್ಷ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆಯ ರಾಜ್ಯಾಧ್ಯಕ್ಷ ಉದಯ್ ಕುಮಾರ್ ತಲ್ಲೂರು ಅವರ ಮುಖಾಂತರ ದಾನಿಗಳಾದ ಶಿರೂರಿನ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಒಕ್ಕೂಟದ […]