ಕೋಟ: ಕರುವಿನ ಬಾಲ ಕತ್ತರಿಸಿದ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್: ಹಲವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು.

ಕೋಟ: ಕರುವಿನ ಬಾಲವನ್ನು ಮತಾಂಧ ವ್ಯಕ್ತಿ ತುಂಡರಿಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ ಹಲವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. “ಬ್ರಹ್ಮಾವರದ ಗುಂಡ್ಮಿ ಗ್ರಾಮದ ಭಗವತಿ ರಸ್ತೆಯಲ್ಲಿರುವ ನಾಗೇಶ ಮಯ್ಯ ಎಂಬವರ ಮನೆಯ ದನದ ಕರುವಿನ ಬಾಲದ ತುದಿಯನ್ನು ಮತಾಂಧರು ಕತ್ತರಿದ್ದಾರೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡುತ್ತಿದ್ದು, ಈ ಬಗ್ಗೆ ಕೋಟ ಎಸ್ಸೈ ಮನೆಗೆ ತೆರಳಿ ವಿಚಾರಿಸಿದರು. ಅದರಂತೆ ಜ.28ರಂದು ಮಧ್ಯಾಹ್ನ 2ಗಂಟೆಗೆ ನಾಗೇಶ ಮಯ್ಯ ಹಾಗೂ ಅವರ […]