ಗುಲ್ವಾಡಿ ಹಾಡಿದೈವದ ಮನೆಯ ಪರಿವಾರ ದೈವಗಳ ನೂತನ ಶಿಲಾಮಯ ಗುಡಿ ಉದ್ಘಾಟನೆ, ಬ್ರಹ್ಮಕಲಶಾಭಿಷೇಕ

ಉಡುಪಿ: ದೈವ ದೇವರ ಬಗ್ಗೆ ನಮ್ಮಲ್ಲಿ ಭಯಭಕ್ತಿಗಳು ತುಂಬಿರಬೇಕು. ಯಾರಿಗೂ ಕಾಣಿಸದಿರುವ ಹಾಗೆ ಅಪರಾಧಗಳನ್ನು ಮಾಡಿದರೂ ಅದು ದೈವದೇವರಿಗೆ ಮೋಸ ಮಾಡಲು ಸಾಧ್ಯವಿಲ್ಲ ಎಂಬ ಸತ್ಯ ಅರಿತಾಗ ಮಾನವ ನ್ಯಾಯ, ಧರ್ಮದ ದಾರಿಯಲ್ಲಿ ನಡೆಯುತ್ತಾನೆ. ದೈವದೇವರ ಭಯ ಸನ್ಮಾರ್ಗದಲ್ಲಿ ನಡೆಸಲು ಪ್ರೇರಣೆ ನೀಡುತ್ತದೆ. ನಮ್ಮ ಭಕ್ತಿ , ಶೃದ್ಧೆ, ನಂಬಿಕೆಗಳು ಗಟ್ಟಿಯಾಗಿ ಬೆಳೆಯಬೇಕಾದರೆ ಆ ಶೃದ್ಧಾ ಕೇಂದ್ರಗಳು ಚೆನ್ನಾಗಿ ಅಭಿವೃದ್ಧಿ ಹೊಂದಿರಬೇಕು ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥರು ಹೇಳಿದರು. ಅವರು ಬುಧವಾರ ಕುಂದಾಪುರ ಗುಲ್ವಾಡಿ […]