ಯಾವ ಯಾವ ತರಕಾರಿಗಳನ್ನು ಹಸಿಯಾಗಿ ಸೇವಿಸಬಾರದು ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ..

ತರಕಾರಿಗಳನ್ನು ಬೇಯಿಸುವುದರಿಂದ ಅವುಗಳ ಪೌಷ್ಟಿಕಾಂಶಗಳು ನಾಶವಾಗುತ್ತವೆ; ಹಣ್ಣು- ತರಕಾರಿಗಳನ್ನು ಸಂಸ್ಕರಿಸದೇ ಅಥವಾ ಬೇಯಿಸದೇ ಸೇವಿಸುವುದರಿಂದ ಹೆಚ್ಚಿನ ಶಕ್ತಿ ಬರುತ್ತದೆ. ತ್ವಚೆ ಉತ್ತಮವಾಗುತ್ತದೆ; ಜೀರ್ಣತೆ ಸುಧಾರಿಸುತ್ತದೆ ಹಾಗೂ ಹೃದ್ರೋಗ ಮತ್ತು ಕ್ಯಾನ್ಸರ್ ಸಾಧ್ಯತೆ ಕಡಿಮೆಯಾಗುತ್ತದೆ ಎನ್ನುವುದು ಹಸಿ ತರಕಾರಿಯ ಪ್ರಯೋಜಗಳನ್ನು ಪ್ರತಿಪಾದಿಸುವವರ ವಾದ. ತೀರಾ ಬೇಯಿಸುವುದರಿಂದ ತರಕಾರಿಗಳ ಪೌಷ್ಟಿಕಾಂಶ ನಾಶವಾಗುತ್ತದೆ ಎಂದು ಹೇಳಲಾಗಿದೆ. ಆದಾಗ್ಯೂ ಎಲ್ಲ ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು. ಕೆಲ ತರಕಾರಿಗಳನ್ನು ಬೇಯಿಸಿದಾಗ ಪೌಷ್ಟಿಕಾಂಶಗಳ ಹೀರುವಿಕೆ ಸುಧಾರಿಸುತ್ತದೆ. ಈ ತರಕಾರಿಗಳನ್ನು ಹಸಿಯಾಗಿ ಸೇವಿಸುವುದರಿಂದ ಪರಾವಲಂಬಿ ಕೀಟಗಳು, ಬ್ಯಾಕ್ಟೀರಿಯಾ, […]