ಬಿಗ್ ಬಜಾರ್ ಉಡುಪಿ ಇದರ ಹತ್ತನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆಯ ಫಲಿತಾಂಶ ಪ್ರಕಟ: ಹಿರಣ್ಮಯೀ ಭಟ್ ಪ್ರಥಮ, ಸಹನ್ ಜೆ. ಅಮೀನ್ ದ್ವಿತೀಯ

ಉಡುಪಿ: ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಬಿಗ್ ಬಜಾರ್ ಉಡುಪಿ ವತಿಯಿಂದ ಆಯೋಜಿಸಿದ್ದ ಹತ್ತನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆ (ಆನ್ ಲೈನ್ ಮೂಲಕ)ಯಲ್ಲಿ ಹಿರಣ್ಮಯೀ ಭಟ್ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಇದೇ ವಿಭಾಗದಲ್ಲಿ ಸಹನ್ ಜೆ. ಅಮೀನ್ ದ್ವಿತೀಯ ಹಾಗೂ ಅನ್ವಿಕಾ ಅನಿಲ್ ಪೈ ತೃತೀಯ ಸ್ಥಾನ ಗಳಿಸಿದ್ದಾರೆ. ಬಾಲಕೃಷ್ಣ ವಿಭಾಗದಲ್ಲಿ ಶ್ರೀಯಾ ಎಸ್. ಕಾಂಚನ್ ಪ್ರಥಮ, ಅಯನ ಎಂ. ಪೈ ದ್ವಿತೀಯ ಹಾಗೂ ಅದ್ವಿತ್ ಕುಲಾಲ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಿಶೋರ ಕೃಷ್ಣ ವಿಭಾಗದಲ್ಲಿ ಪ್ರತ್ಯುಷ ಪಿ. ನಾಯ್ಕ್ […]