ಕಾಂಗ್ರೆಸ್ ನಾಯಕರು ದುರಹಂಕಾರ ಬಿಡಬೇಕು: ಜನಾರ್ದನ ಪೂಜಾರಿ

ಮಂಗಳೂರು: ಕಾಂಗ್ರೆಸ್ ಮುಖಂಡರುಗಳು ದುರಹಂಕಾರ ಪ್ರದರ್ಶಿಸಿದ ಕಾರಣ ಬಿಜೆಪಿ ಗೆದ್ದಿದೆ. ಬಿಜೆಪಿ ಗೆಲ್ಲಬೇಕು, ಆಗ ಇವರಿಗೆ ಅರ್ಥ ಆಗುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆಯ ವಿಚಾರವಾಗಿ ಮಂಗಳೂರಿನಲ್ಲಿ ಮಾತನಾಡಿದ ಅವರು ನೀವು ಹೀಗೆ ದುರಹಂಕಾರ ಮಾಡಿದರೆ ಬಿಜೆಪಿ ತಡೆಯಲು ಸಾಧ್ಯವಿಲ್ಲ ಎಂದು ಪಕ್ಷದವರಿಗೆ ಹೇಳಿದೆ. ಕೈಮುಗಿದು, ಕಣ್ಣೀರು ಸುರಿಸಿ ಹೇಳಿದೆ. ಆದರೆ ಪಕ್ಷದವರಿಗೆ ಅರ್ಥ ಆಗಿಲ್ಲ. ಸರಿಮಾಡಿಕೊಂಡು ಹೋಗಿ ದುರಹಂಕಾರ ಮಾಡಬೇಡಿ ಅಂದರೂ ಕೇಳಲಿಲ್ಲ. ಈಗ ಅನುಭವಿಸುತ್ತಿದ್ದಾರೆ. ಇನ್ನೂ […]