ಮಂಡ್ಯ ದೇವಳದಲ್ಲಿ ಅರ್ಚಕರ ಹತ್ಯೆ: ಪೇಜಾವರ ಶ್ರೀ ಖಂಡನೆ 

ಉಡುಪಿ: ಮಂಡ್ಯದ ಪ್ರಾಚೀನ ಅರ್ಕೇಶ್ವರ ಸ್ವಾಮೀ ದೇವಸ್ಥಾನದಲ್ಲಿ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆಗೈದು, ಬೆಲೆಬಾಳುವ ಸೊತ್ತುಗಳನ್ನು ದೋಚಿರುವ ಪೈಶಾಚಿಕ ಕೃತ್ಯವನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರವಾಗಿ ಖಂಡಿಸಿದ್ದಾರೆ. ಪವಿತ್ರ ಸ್ಥಳದಲ್ಲಿ ನಡೆದಿರುವ ಈ ದುಷ್ಕೃತ್ಯದಿಂದ ಅತ್ಯಂತ ವಿಷಾದವಾಗಿದೆ. ಈ ಕೃತ್ಯವನ್ನು ನಡೆಸಿದ ದುರುಳರನ್ನು ಸರಕಾರ ಶೀಘ್ರ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮೃತ ಅರ್ಚಕರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು. ನಾಡಿನಲ್ಲಿ ಇಂತಹ ಅಮಾನವೀಯ ಘಟನೆಗಳು ಮುಂದೆಂದೂ ನಡೆಯದಂತೆ ಸಮಾಜ ಮತ್ತು […]