ಬಾಲ್ಯದಲ್ಲೇ ಯಕ್ಷರಂಗದಲ್ಲಿ ಗೆಜ್ಜೆ ಕಟ್ಟಿದ್ರು ಕಾರ್ಕಳದ ಎಳ್ಳಾರೆ ಹುಡ್ಗ: ಈ ಬಾಲ ಪ್ರತಿಭೆಯ ಕತೆ ಕೇಳಿ
ಯಕ್ಷಗಾನ “ಯಕ್ಷಗಾನಂ ವಿಶ್ವಗಾನಂ” ಎನ್ನುವಂತೆ ಯಕ್ಷಗಾನ ಕಲೆಯು ವಿಶ್ವದಲ್ಲಿ ಅತ್ಯಂತ ಪ್ರಸಿದ್ದವಾಗಿದೆ. ಯಕ್ಷಗಾನದ ಉಭಯ ತಿಟ್ಟುಗಳಲ್ಲಿ ಹಲವಾರು ಬಾಲ ಕಲಾವಿದರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇಂತಹ ಕಲಾವಿದರಲ್ಲಿ ಅನುಜಿತ್ ನಾಯಕ್ ಎಳ್ಳಾರೆ ಕೂಡ ಒಬ್ಬರು. ಬಾಲ ಕಲಾವಿದನಾಗಿ ಯಕ್ಷಗಾನ ಕ್ಷೇತ್ರದಲ್ಲಿ ಈಗಾಗಲೇ ಮಿಂಚುತ್ತಿರುವ ಅನುಜಿತ್ ಕನಸು ಕಂಗಳ ಹುಡುಗ. ಕನಸುಕಂಗಳ ಹುಡುಗ: ಕಾರ್ಕಳ ತಾಲೂಕಿನ ಎಳ್ಳಾರೆಯ ಶ್ರೀ ನಿವಾಸ್ ನಾಯಕ್, ಜ್ಯೋತಿ ನಾಯಕ್ ದಂಪತಿಗಳ ಪುತ್ರ ಅನುಜಿತ್, ತನ್ನ ಅಣ್ಣ ಮುಂಬೈ ಯಕ್ಷರಂಗದ ಶ್ರೇಷ್ಠ ಕಲಾವಿದ […]