ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಎನ್ಎಸ್ಎಸ್ ಘಟಕಗಳ ಉದ್ಘಾಟನೆ

ಬ್ರಹ್ಮಾವರ: ಇಲ್ಲಿನ ಪ್ರತಿಷ್ಠಿತ ಎಸ್ಎಂಎಸ್ ಕಾಲೇಜು ಬ್ರಹ್ಮಾವರ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಉದ್ಘಾಟನಾ ಸಮಾರಂಭವು ಕಾಲೇಜಿನ ಮಿನಿ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ, ಉತ್ತಮ ಉಪನ್ಯಾಸಕ ರಾಜ್ಯಪ್ರಶಸ್ತಿ ವಿಜೇತೆ ಸವಿತಾ ಎರ್ಮಾಳ್ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಎನ್ ಎಸ್ ಎಸ್ ಪೂರಕವಾಗಿದೆ ಎಂದರು.

ಎನ್ ಎಸ್ಎಸ್ ಘಟಕಗಳ ಯೋಜನಾಧಿಕಾರಿಗಳಾದ ವಿದ್ಯಾಲತಾ, ರಘುರಾಮ ಶೆಟ್ಟಿ, ಸಹ ಯೋಜನಾಧಿಕಾರಿಗಳಾದ ಪ್ರಶಾಂತ್ ದೇವಾಡಿಗ, ಜ್ಯೋತಿ, ಘಟಕಗಳ ನಾಯಕರಾದ ಸುಮಂತ್, ಸುಶಾಂತ್, ಸುಲೇಖಾ ಮತ್ತು ರಾಧಿಕಾ ಉಪಸ್ಥಿತರಿದ್ದರು.