ಕಾರ್ಕಳ: ‘ಬೇಕ್ ಲೈನ್’ ಕೇಕ್ ಶಾಪ್ ಶುಭಾರಂಭ

ಕಾರ್ಕಳ: ಕರಾವಳಿ ಜಿಲ್ಲೆಯಾದ್ಯಂತ ಮುಂಚೂಣಿಯಲ್ಲಿರುವ ಕೇಕ್ ಶಾಪ್ ಬೇಕರಿ ಬೇಕ್ ಲೈನ್ ಭಾನುವಾರ ಕಾರ್ಕಳದ ಬಂಡಿಮಠ ಬಸ್ ಸ್ಸ್ಟ್ಯಾಂಡ್ ನಲ್ಲಿ ಅದ್ಧೂರಿಯಾಗಿ ಶುಭಾರಂಭಗೊಂಡಿತು‌.

ಉಡುಪಿ, ಕಟಪಾಡಿ, ತೆಂಕನಿಡಿಯೂರು, ಮುದರಂಗಡಿ, ಮೂಡುಬೆಳ್ಳೆಯಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಬೇಕ್ ಲೈನ್, ರುಚಿಕರ ವೆರೈಟಿ ಕೇಕ್ ಗಳನ್ನು ಗ್ರಾಹಕರಿಗೆ ನೀಡುವಲ್ಲಿ ಸೈ ಎನಿಸಿಕೊಂಡಿದೆ.

ಮಾಜಿ ಪುರಸಭೆ ಅಧ್ಯಕ್ಷ ಸುಬೀತ್ ಎನ್.ಆರ್. ಬೇಕ್ ಲೈನ್ ಅನ್ನು ಉದ್ಘಾಟಿಸಿದರು. ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಜಿಪಂ ಸದಸ್ಯ ಸುಮಿತ್ ಶೆಟ್ಟಿ ಬೈಲೂರು, ಕಾರ್ಕಳ‌ ಬಿಲ್ಲವ ಸಂಘದ ಅಧ್ಯಕ್ಷ ಡಿ.ಆರ್. ರಾಜು, ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಕೋಟ್ಯಾನ್, ದಾನಶಾಲೆ ಸದಸ್ಯರಾದ ಪ್ರದೀಪ್, ಜೀವನ್, ಗೀತಾಂಜಲಿ ಸಂಸ್ಥೆಯ ಸಂತೋಷ್ ವಾಗ್ಲೆ, ಬೇಕ್ ಲೈನ್ ಸಂಸ್ಥೆಯ ಪಾಲುದಾರರು ಉಪಸ್ಥಿತರಿದ್ದರು.

ರುಚಿ ರುಚಿ ಕೇಕ್ ಮನೆಬಾಗಿಲಿಗೆ:
ಕರೆ ಮಾಡಿದರೆ ಕ್ಲಪ್ತ ಸಮಯದಲ್ಲಿ ಮನೆಬಾಗಿಲಿಗೆ ರುಚಿಕರ ಕೇಕ್ ಗಳನ್ನು ಡೆಲಿವರಿ ಮಾಡುವ ಫ್ರೀ ಹೋಮ್ ಡೆಲಿವೆರಿ ಸೇವೆಗಳಿಗೆ ಕೂಡ ಬೇಕ್ ಲೈನ್ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಜನಪ್ರಿಯತೆ ಗಳಿಸಿದೆ. ವಿಭಿನ್ನ ಮಾದರಿಯ ತಾಜಾ ಕೇಕ್ ಗಳು ಮಾತ್ರವಲ್ಲ ಬಗೆಬಗೆಯ ಸಿಹಿ ಖಾಧ್ಯಗಳು ಕೂಡ ಬೇಕ್ ಲೈನ್ ನಲ್ಲಿ ಲಭ್ಯ. ಕಾರ್ಕಳದ ಜನತೆಗೆ ಬೇಕಾದ ವಿಭಿನ್ನ ಮಾದರಿಯ ಫ್ರೆಶ್ ಕೇಕ್ ಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಒದಗಿಸಬೇಕು. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಬೇಕು ಎನ್ನುವುದು ಬೇಕ್ ಲೈನ್ ಸಂಸ್ಥೆಯ ಆಶಯ ಎಂದು‌ ಬಣ್ಣಿಸಿದರು.