ಯಶಸ್ಸಿನ ಹಾದಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ: ನಾಳೆ ಉಡುಪಿಯಲ್ಲಿ ಹೊಸ ಶಾಖೆ ಶುಭಾರಂಭ

ಉಡುಪಿ: 2001ರಲ್ಲಿ ಉಡುಪಿ ಜಿಲ್ಲೆಯ ಪರ್ಕಳದ ಸಣ್ಣ ಪರಿಸರದಲ್ಲಿ ಆರಂಭಗೊಂಡ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 19 ಸಂವತ್ಸರಗಳನ್ನು ಪೂರೈಸಿ ವಿಶಂತಿ ವರ್ಷಾಚರಣೆಯ ಹಾದಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಕಲ್ಸಂಕದ ಅಜೇಯ್ ಟವರ್ಸ್ ನ ಪ್ರಥಮ ಮಹಡಿಯಲ್ಲಿ ತನ್ನ ಆರನೇ ಶಾಖೆಯನ್ನು ಇದೇ ಡಿಸೆಂಬರ್ 17ರ ಗುರುವಾರದಂದು ಉದ್ಘಾಟನೆಗೊಂಡು ಉಡುಪಿ ಜನತೆಗೆ ಸೇವೆಯನ್ನು‌ ನೀಡಲಿದೆ.

ಪರ್ಕಳದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಬಂಟಕಲ್ಲು, ಹಿರಿಯಡಕ, ಮಣಿಪಾಲ, ಕುಕ್ಕೆಹಳ್ಳಿಗಳಲ್ಲಿ‌ ಶಾಖೆಗಳನ್ನು ಒಳಗೊಂಡಿದೆ. ಆ ಪೈಕಿ ಮೂರು ಶಾಖೆಗಳು ಸ್ವಂತ ಕಟ್ಟಡದಲ್ಲಿದ್ದು, ಎರಡು ಶಾಖೆಗಳು ಬಾಡಿಗೆ ಕಟ್ಟಡದಲ್ಲಿದೆ.

ಗ್ರಾಹಕರಿಗೆ ವಿಶೇಷ ಸೌಲಭ್ಯ:
ಸೊಸೈಟಿಯು ಅತ್ಯಾಧುನಿಕ ಬ್ಯಾಂಕಿಂಗ್ ವ್ಯವಸ್ಥೆಗಳಾದ ಕೋರ್ ಬ್ಯಾಂಕಿಂಗ್ ಮೊವಾಯಿಲ್ ಆ್ಯಪ್ ನಂತಹ ತಂತ್ರಜ್ಞಾನವನ್ನು ಹೊಂದಿದೆ. ಸದಸ್ಯರಿಗೆ ಉತ್ಕೃಷ್ಟ ಸೇವೆಯನ್ನು ನೀಡುತ್ತಾ ಬಂದಿದೆ. ‘ನಿಮ್ಮ ಸಂತುಷ್ಟಿ ನಿಮ್ಮ ವಿಶ್ವಾಸವೇ ನಮ್ಮ ಗುರಿ’ ಎಂಬ ಧ್ಯೇಯವಾಕ್ಯದೊಂದಿಗೆ ಜನಮನ ಮಾನಸದಲ್ಲಿ ಉತ್ತಮ ಸಹಕಾರಿಯಾಗಿ ಮೂಡಿಬರುತ್ತಿದೆ.

₹1.28 ಕೋಟಿ ನಿವ್ವಳ ಲಾಭ:

ಸೊಸೈಟಿ ₹69 ಕೋಟಿಗೂ ಅಧಿಕ ಠೇವಣಿ ಹೊಂದಿದ್ದು, ₹53 ಕೋಟಿಗೂ ಅಧಿಕ ಸಾಲ ವಿತರಣೆ ಮಾಡಿದೆ. ₹ 1.28 ಕೋಟಿ ನಿವ್ವಳ ಲಾಭಗಳಿಸಿದೆ. ಅಡಿಟ್ ನಲ್ಲಿ ಎ ಶ್ರೇಣಿಗಳಿಸಿದ ಸಹಕಾರಿಯಾಗಿ ಹೊರಹೊಮ್ಮಿದೆ. ನಮ್ಮ ಸಂಸ್ಥೆಗೆ ನಿಮ್ಮ ಪ್ರೋತ್ಸಾಹ, ಶುಭಹಾರೈಕೆ ಹಾಗೂ ಉಡುಪಿ ಜನತೆಯ ಸಹಕಾರವನ್ನು ಯಾಚಿಸುತ್ತಿರುವ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ನಾಯಕ್ ನರಸಿಂಗೆ ಹಾಗೂ ಅಧ್ಯಕ್ಷ ಬಿ. ರಾಮಕೃಷ್ಣ ನಾಯಕ್ ಪರ್ಕಳ.

ನಾಳೆ ಉಡುಪಿ ಶಾಖೆ ಉದ್ಘಾಟನೆ
ಉಡುಪಿ-ಕಲ್ಸಂಕ ಮುಖ್ಯ ರಸ್ತೆಯ ಶಂಕರನಾರಾಯಣ ದೇವಸ್ಥಾನದ ಸಮೀಪದ ಅಜೇಯ್ ಟವರ್ಸ್ ನಲ್ಲಿ ಆರಂಭಿಸಲಾಗಿರುವ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಉಡುಪಿ ಶಾಖೆಯನ್ನು ನಾಳೆ (ಡಿ. 17) ಬೆಳಿಗ್ಗೆ 10.30ಕ್ಕೆ ಗೋವಾ ಕವಳೇ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹರಾಜ್ ಉದ್ಘಾಟಿಸಲಿದ್ದಾರೆ.