ಮಧ್ವ ಪರಂಪರೆಯ ಐತಿಹಾಸಿಕ ಮಹಿಮೆ: ತಂದೆಯವರು ತೋರಿಸಿದ ಪುರಾಣ ದರ್ಶನವಿದು!: ಲಾತವ್ಯ ಬರಹ

ತಪಸ್ಸು ಶ್ರೀನೃಸಿಂಹ ದೇವರಿಗಾಗಿ.. ಒಲಿದದ್ದು ರುದ್ರದೇವರು.. ಹರಿದದ್ದು ಶ್ರೀಪಾದರ ಕಣ್ಣೀರ ಕೋಡಿ.. ನಮ್ಮ ಬಾಲ್ಯದಲ್ಲಿ ತಂದೆ ಶ್ರೀ ವಿಠಲ ಆಚಾರ್ಯರು ಧರ್ಮ, ದೇವರುಗಳಿಗೆ ಸಂಬಂಧಿಸಿದ ಏನಾದರೊಂದು ಕತೆಯನ್ನೋ ಇಲ್ಲಾ ಅವರ ಅನುಭವವನ್ನೋ ಆಗಾಗ್ಗೆ ತೆರೆದಿಡುತ್ತಿದ್ದರು. ಅವರು ಹೇಳುತ್ತಿದ್ದ ಕೆಲವು ಸತ್ಯ ಘಟನೆಗಳು ದಂತ ಕತೆಗಳಂತೆ ಭಾಸವಾಗುತ್ತಿತ್ತು. ಇದೂ ಸಾಧ್ಯವೇ ಅನ್ನುವಷ್ಟರ ಮಟ್ಟಿಗೆ ಸಂಕೀರ್ಣತೆಯಿಂದ ಕೂಡಿರುತ್ತಿದ್ದವು. ಒಮ್ಮೆ 90ರ ದಶಕದಲ್ಲಿ ತಂದೆಯವರು ಹೇಳಿದ್ದ ಒಂದು ಘಟನೆಯನ್ನು ಬೆಂಬತ್ತಿ ಸಾಗಿದಾಗ ನಾನು ಮೂಕವಿಸ್ಮಿತನಾಗಿದ್ದೆ.. ಆಚಾರ್ಯ ಮಧ್ವರ ಯತಿ ಪರಂಪರೆಯಲ್ಲಿ ಸಂಭವಿಸಿದ […]

ಮಾ.1: ಕಾಯಕ ಶರಣರ ಜಯಂತಿ

ಉಡುಪಿ, ಫೆ.28: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ವತಿಯಿಂದ ಕಾಯಕ ಶರಣರ ಜಯಂತಿ ಆಚರಣೆಯು ಮಾರ್ಚ್ 1 ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಉಡುಪಿ: ಮಾ.6ಕ್ಕೆ ಉಡುಪಿ ಜಿಲ್ಲಾ ಕೃಷಿಕ ಸಂಘದ ರಜತ ಸಂಭ್ರಮದ ಜಿಲ್ಲಾ ರೈತ ಸಮಾವೇಶ

ಉಡುಪಿ ಜಿಲ್ಲಾ ಕೃಷಿಕ ಸಂಘದ ರಜತ ಸಂಭ್ರಮದ ಜಿಲ್ಲಾ ರೈತ ಸಮಾವೇಶ -2022 ಮಾ.6ರಂದು ಉಡುಪಿ ಕುಂಜಿಬೆಟ್ಟು ಶ್ರೀ ಶಾರದಾ ಮಂಟಪ ಆವರಣದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದ್ದಾರೆ. ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ಅಂದು ಬೆಳಿಗ್ಗೆ 10.15ಕ್ಕೆ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ರಘುಪತಿ […]

ಮಾ.1: ಡಾ.ಶಿವರಾಮ ಕಾರಂತ ಥೀಂ ಪಾರ್ಕ್ ಆವರಣದ ಸಂಗೀತ ಕಾರಂಜಿ, ವೀಕ್ಷಣಾ ಗ್ಯಾಲರಿ ಉದ್ಘಾಟನೆ

ಉಡುಪಿ, ಫೆ.28: ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ಬ್ರಹ್ಮಾವರ ತಾಲೂಕು ಕೋಟ ಡಾ. ಶಿವರಾಮ ಕಾರಂತ ಥೀಂ ಪಾರ್ಕ್ ಆವರಣದಲ್ಲಿ ನಿರ್ಮಿಸಲಾದ ವಿನೂತನ ಮಾದರಿಯ ಸಂಗೀತ ಕಾರಂಜಿ ಹಾಗೂ ವೀಕ್ಷಣಾ ಗ್ಯಾಲರಿಯ ಉದ್ಘಾಟನಾ ಸಮಾರಂಭವು ಮಾರ್ಚ್ 1 ರಂದು ಸಂಜೆ 6 ಗಂಟೆಗೆ ಕೋಟ ಡಾ. ಶಿವರಾಮ ಕಾರಂತ ಥೀಂ ಪಾರ್ಕ್ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. […]

ಮಾಜಿ ಸಿಎಂ ಯಡಿಯೂರಪ್ಪನವರ ಮನೆಗೆ ಪೇಜಾವರ ಶ್ರೀ ಭೇಟಿ

ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸೋಮವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಯಡಿಯೂರಪ್ಪ ನವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿದರು.‌ ಬಿಎಸ್ ವೈ ಮತ್ತು ಮನೆಮಂದಿ ಶ್ರೀಗಳವರನ್ನು ಭಕ್ತಿ ಆದರದಿಂದ ಬರಮಾಡಿಕೊಂಡು ಫಲಪುಷ್ಪ ಸಮರ್ಪಿಸಿ ಸತ್ಕರಿಸಿದರು. ನಿನ್ನೆ ಭಾನುವಾರ ಯಡಿಯೂರಪ್ಪನವರ ಜನ್ಮದಿನ ಇದ್ದ ಹಿನ್ನೆಲೆಯಲ್ಲಿ ಶ್ರೀಗಳವರು ಅವರಿಗೆ ಶಾಲು, ಶ್ರೀ ಕೃಷ್ಣನ ಮೂಲಗಂಧ ಪ್ರಸಾದ ಸಹಿತ ಆಶೀರ್ವದಿಸಿ ನಾಡಿಗೆ ಇನ್ನೂ ಬಹುಕಾಲ ಅವರ ಸೇವೆ ದೊರೆಯುವಂತೆ ದೇವರು ಅನುಗ್ರಹಿಸಲಿ ಎಂದು ಆಶೀರ್ವದಿಸಿದರು. ಬಿಎಸ್ […]