ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಮರು ಸೇರ್ಪಡೆ

ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಕನ್ನಡ ಭಾಷೆಯಲ್ಲಿ ಅಳವಡಿಸಿದ್ದು, ಅದರ ಬದಲು ಸಮಾಜ ವಿಜ್ಞಾನ ವಿಷಯದ ಪಠ್ಯದಲ್ಲಿ ಅಳವಡಿಸಲು ಸಚಿವ ಸುನಿಲ್ ಕುಮಾರ್ ಅವರ ಕೋರಿಕೆಯ ಹಿನ್ನೆಲೆಯಲ್ಲಿ ಗುರುಗಳ ಕುರಿತಾದ ಪಾಠವನ್ನು ಸಮಾಜ ವಿಜ್ಞಾನ ವಿಷಯದ ಪಠ್ಯ ಪುಸ್ತಕದಲ್ಲಿ ತಕ್ಷಣ ಅಳವಡಿಸಲು ಸರ್ಕಾರಿ ಆದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಸರಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಬಿಲ್ಲವ ಸಮಾಜವು ಅಧಿಕೃತ ಆದೇಶ ಬಂದ ಕೂಡಲೇ ಈಗಾಗಲೇ ಕರೆ […]

ಜುಲೈ 12-13 ರಂದು ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ

ಉಡುಪಿ: ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಮೊಮ್ಮಾಯಿ ಜುಲೈ 12 ಮತ್ತು 13 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜು. 12 ರಂದು ರಾತ್ರಿ 8.30 ಕ್ಕೆ ಉಡುಪಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಜು. 13 ರಂದು ಬೆಳಗ್ಗೆ 9 ಗಂಟೆಗೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಳೆ ಹಾನಿಗೆ ಸಂಬಂಧಿಸಿದಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಂತರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ತೆರಳುವರು. 2.45 ಗಂಟೆಗೆ ಭಟ್ಕಳದಿಂದ ಹೊರಟು, […]

ನಟ ರಣವೀರ್ ಸಿಂಗ್ ಬಾಂದ್ರಾ ಹೊಸ ಮನೆ ಬೆಲೆ ಬರೋಬ್ಬರಿ 119 ಕೋಟಿ ರೂಪಾಯಿ!

ಮುಂಬೈ: ನಟ ರಣವೀರ್ ಸಿಂಗ್ ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿರುವ ಸಾಗರ್ ರೇಶಮ್ ಎಂಬ ಐಷಾರಾಮಿ ವಸತಿ ಟವರ್ ನಲ್ಲಿ ಫ್ಯಾನ್ಸಿ ಸೀ-ವ್ಯೂ ಕ್ವಾಡ್ರಪ್ಲೆಕ್ಸ್ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದಾರೆ. ವರದಿಗಳ ಪ್ರಕಾರ, ಈ ಐಷಾರಾಮಿ ಕ್ವಾಡ್ರಾಪ್ಲೆಕ್ಸ್ ನ ಬೆಲೆ ಸರಿ ಸುಮಾರು 119 ಕೋಟಿ ರೂಪಾಯಿ! ಸಾಗರ್ ರೇಶಮ್ ಟವರ್ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಮತ್ತು ಶಾರುಖ್ ಖಾನ್ ಅವರ ಬಂಗಲೆ ಮನ್ನತ್ ನಡುವೆ ಇದೆ. ವರದಿಯ ಪ್ರಕಾರ, ಸಿಂಗ್ ಅವರ ಹೊಸ ಕ್ವಾಡ್ರಪ್ಲೆಕ್ಸ್, ಟವರ್ […]

ಜೆ.ಇ.ಇ ಮೈನ್ಸ್ ನಲ್ಲಿ ಬೇಸ್ ಸಂಸ್ಥೆ ವಿದ್ಯಾರ್ಥಿಗಳಿಂದ ಸಾಧನೆ

ಉಡುಪಿ: ಇಲ್ಲಿನ ಬೇಸ್ ಸಂಸ್ಥೆಯಲ್ಲಿ ಕಲಿಯುತ್ತಿರುವ ಕ್ಲಾಸ್ ರೂಂ ವಿದ್ಯಾರ್ಥಿ ಪ್ರಥಮ್ ಶೆಟ್ಟಿ ಜೆ.ಇ.ಇ ಮೈನ್ಸ್ ನಲ್ಲಿ 99.03 ಪರ್ಸಂಟೈಲ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ತಪಸ್ ಬೇಸ್ ಸಂಸ್ಥೆಯ ವಿದ್ಯಾರ್ಥಿಗಳಾದ ಯು ಸ್ಕಂದ ಐತಾಳ್ 99.91 ಪರ್ಸಂಟೈಲ್, ಲಿಖಿತ್ ಆರ್ 99.63 ಪರ್ಸಂಟೈಲ್, ಪ್ರಕಾಶ್ ಗೌಡ ಟಿ. ಆರ್ 99.37 ಪರ್ಸಂಟೈಲ್, ಕಾರ್ಥಿಕ್ ಸತೀಶ್ 99.27 ಪರ್ಸಂಟೈಲ್, ಸಾಯಿ ಚಿರಂಥನ್ ಹೆಚ್.ಎಮ್ 98.50 ಪರ್ಸಂಟೈಲ್, ಸಾಗರ್ ಎಸ್ ಅಥಣಿ 98.47 ಪರ್ಸಂಟೈಲ್, ಚನ್ನಪ್ಪ ಕಲಹಳ್ 98.01 […]

ಕಾಪು: ಕಡಲ್ಕೊರೆತ ಪ್ರದೇಶಕ್ಕೆ ಕೇಂದ್ರ ಸಚಿವೆ ಭೇಟಿ

ಉಡುಪಿ: ಕಾಪು ತಾಲೂಕಿನ ಮುಳೂರಿನ ಕಡಲ್ಕೊರೆತ ಪ್ರದೇಶಕ್ಕೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲಾಧಿಕಾರಿ ಕೂರ್ಮಾ ರಾವ್ ಜೊತೆಗಿದ್ದರು. ಕುಂದಾಪುರ ಎಸಿ ರಾಜು ಮತ್ತಿತರರು ಉಪಸ್ಥಿತರಿದ್ದರು.   ಕೃಪೆ: ಟ್ವಿಟರ್